Advertisement

ಸುರತ್ಕಲ್‌: ಮಾಳವಿಕಾ ಅವಿನಾಶ್‌ ಮತಯಾಚನೆ

06:13 PM Apr 12, 2019 | Team Udayavani |

ಸುರತ್ಕಲ್‌: ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್‌ ಅವರು ಗುರುವಾರ ಸುರತ್ಕಲ್‌ನಲ್ಲಿ ಮೀನು ಮಾರುಕಟ್ಟೆ ಹಾಗೂ ಮಳಿಗೆಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದರು.ಬಳಿಕ ಮೀನುಗಾರರೊಂದಿಗೆ ಮಾತುಕತೆ ನಡೆಸಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ರಾಜ್ಯದ ಸಮ್ಮಿಶ್ರ ಸರಕಾರ ಅಧಿಕಾರದ ದುರುಪಯೋಗ ನಡೆಸುತ್ತಿದೆ. ಇದಕ್ಕೆ ಅಲ್ಲಿನ ಜಿಲ್ಲಾಧಿಕಾರಿಯ ವರ್ಗಾವಣೆ ಉದಾಹರಣೆ. ರಾಹುಲ್‌ ಗಾಂಧಿ  ಅಮೇಠಿಯಲ್ಲಿ ಸೋಲಿನ ಭೀತಿಯಿಂದ ಕೇರಳದ ವಯಾನಾಡಿನಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ದೇಶ, ಮೋದಿ ವಿಚಾರದಲ್ಲಿ ಮಾತನಾಡುವ ನೈತಿಕ ಅರ್ಹತೆ ಕಾಂಗ್ರೆಸ್‌ ಕಳೆದುಕೊಂಡಿದೆ. ಯುಪಿಎ ಅಧಿಕಾರದ ಅವಧಿಯಲ್ಲಿ ಆದ ಭ್ರಷ್ಟಾಚಾರವನ್ನು ಜನತೆ ಮರೆತಿಲ್ಲ ಎಂದರು.

ಮಹಿಳಾ ಬಿಜೆಪಿ ಅಧ್ಯಕ್ಷೆ ಪೋಜಾ ಪೈ, ಕವಿತಾ ಪೈ, ಮಾಜಿ ಮೇಯರ್‌ ರಜನಿ ದುಗ್ಗಣ್ಣ, ಸುಮಿತ್ರಾ ಕರಿಯಾ, ಶಾಂತಾ ರವೀಂದ್ರ,ನಯನಾ ಕೋಟ್ಯಾನ್‌, ಗುಡ್ಡೆಕೊಪ್ಲ, ಮಾಜಿ ಮೇಯರ್‌ ಗಣೇಶ್‌ ಹೊಸಬೆಟ್ಟು, ಗುಣಶೇಖರ ಶೆಟ್ಟಿ, ರಾಜೇಶ್‌ ಶೆಟ್ಟಿ, ಅಶೋಕ್‌ ಕೃಷ್ಣಾಪುರ, ಲೋಕೇಶ್‌ ಬೊಳ್ಳಾಜೆ, ಅರುಣ್‌ ಚೌಟ, ಭರತ್‌ರಾಜ್‌ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next