Advertisement

ಎರಡು ವಾರಗಳ ಮುಷ್ಕರ ಕೊನೆಗೊಳಿಸಿದ ಸೂರತ್‌ ಜವುಳಿ ವರ್ತಕರು

10:48 AM Jul 19, 2017 | |

ಅಹ್ಮದಾಬಾದ್‌ : ಜವುಳಿ ಮೇಲಿನ ಶೇ.5ರ ಜಿಎಸ್‌ಟಿಯನ್ನು ಹಿಂದೆಗೆದುಕೊಳ್ಳಬೇಕೆಂಬ ತಮ್ಮ ಬೇಡಿಕೆಯನ್ನು ಪರಿಗಣಿಸುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿರುವುದನ್ನು ಅನುಸರಿಸಿ ಸೂರತ್‌ನ ಜವುಳಿ ವರ್ತಕರು ತಮ್ಮ ಎರಡು ವಾರಗಳ ಸುದೀರ್ಘ‌ ಮುಷ್ಕರವನ್ನು ಹಿಂದೆಗೆದುಕೊಂಡಿದ್ದಾರೆ. 

Advertisement

ಹೊಸ ತೆರಿಗೆ ಕ್ರಮವನ್ನು ವಿರೋಧಿಸಿ ಸೂರತ್‌ನ ಸಾವಿರಾರು ಜವುಳಿ ವರ್ತಕತರು ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದು ತಮ್ಮ ಅಂಗಡಿ ವಹಿವಾಟನ್ನು ಮುಚ್ಚಿದ್ದರು. 

ಜುಲೈ 17ರಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರನ್ನು  ದಿಲ್ಲಿಯಲ್ಲಿ ಜವುಳಿ ವರ್ತಕರ ನಿಯೋಗ ಕಂಡು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಸೂಕ್ತವಾಗಿ ಪರಿಗಣಿಸಲಾಗುವುದೆಂಬ ಭರವಸೆಯನ್ನು ಅನುಸರಿಸಿ ವರ್ತಕರು ತಮ್ಮ ಮುಷ್ಕರವನ್ನು ಹಿಂಪಡೆಯುವುದಾಗಿ ಘೋಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next