Advertisement

ಸೂರತ್‌ ಅಗ್ನಿ ದುರಂತ ; ಕೋಚಿಂಗ್‌ ಸೆಂಟರ್‌ ಮಾಲಕ ಅರೆಸ್ಟ್‌, ಕಟ್ಟಡ ಮಾಲಕರು ನಾಪತ್ತೆ

09:23 AM May 26, 2019 | Sathish malya |

ಸೂರತ್‌ : ನಿನ್ನೆ ಶುಕ್ರವಾರ ಇಲ್ಲಿನ ತಕ್ಷಶಿಲಾ ಆರ್ಕೇಡ್‌ ನಲ್ಲಿ ಸಂಭವಿಸಿದ್ದ ಭೀಕರ ಅಗ್ನಿ ಅವಘಡಕ್ಕೆ ಸಂಬಂಧಿಸಿ ಪೊಲೀಸರು ಇಂದು ಶನಿವಾರ ಕಟ್ಟಡದಲ್ಲಿನ ಕೋಚಿಂಗ್‌ ಸೆಂಟರ್‌ನ ಮಾಲಕ ಭಾರ್ಗವ ಬೂಟಾನಿ ಎಂಬಾತನನ್ನು ಬಂಧಿಸಿದ್ದಾರೆ. ಅಗ್ನಿ ದುರಂತದಲ್ಲಿ 20 ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದರು.

Advertisement

ಈ ನಡುವೆ ತಕ್ಷಶಿಲಾ ಆರ್ಕೇಡ್‌ ಮಾಲಕರಾದ ಹರ್‌ಷುಲ್‌ ವೆಕಾರಿಯಾ ಮತ್ತು ಜಿಗ್ನೇಶ್‌ ಪಾಲಿವಾಲ್‌ ತಲೆ ಮರೆಸಿಕೊಂಡಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಸೂರತ್‌ ಪೊಲೀಸ್‌ ಕಮಿಷನರ್‌ ಸತೀಶ್‌ ಶರ್ಮಾ ತಿಳಿಸಿದ್ದಾರೆ.

ನಾಲ್ಕು ಮಹಡಿಗಳ ತಕ್ಷಶಿಲಾ ಆರ್ಕೇಡ್‌ನ‌ ಮೂರು ಮತ್ತು ನಾಲ್ಕನೇ ಅಂತಸ್ತಿನಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕನಿಷ್ಠ 10 ಮಂದಿ ವಿದ್ಯಾರ್ಥಿಗಳು ಕಟ್ಟಡದಿಂದ ಕೆಳಗೆ ಹಾರಿದ್ದರು.

ರಾಜ್ಯ ಸರಕಾರ ಘಟನೆಯ ಕೂಲಂಕಷ ತನಿಖೆಗೆ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next