Advertisement

ಯುವತಿ ಕೊಲೆ ತನಿಖೆಗೆ ಆಗ್ರಹಿಸಿ ಮನವಿ

12:41 PM May 14, 2020 | Naveen |

ಸುರಪುರ: ತಾಲೂಕಿನ ಅಮಲಿಹಾಳ ಗ್ರಾಮದ ಯುವತಿ ಕೊಲೆ ಪ್ರಕರಣವನ್ನು ಸೂಕ್ತ ತನಿಖೆ ಮಾಡಿಸಿ ನಿಜವಾದ ಕೊಲೆಗಾರರನ್ನು ಬಂಧಿಸಬೇಕು. ಅನವಶ್ಯಕವಾಗಿ ಬಂಧಿಸಲಾಗಿರುವ ಮಹೇಶ ತುಬಾಕದೋರ ಮತ್ತು ಇತರೆ ನಾಲ್ವರನ್ನು ಬಿಡುಗಡೆ ಮಾಡುವಂತೆ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಆಗ್ರಹಿಸಿದೆ.

Advertisement

ಈ ಕುರಿತು ತಹಶೀಲ್ದಾರ್‌ ನಿಂಗಣ್ಣ ಬಿರಾದಾರ ಮತ್ತು ಶಾಸಕ ರಾಜೂಗೌಡ ಅವರಿಗೆ ಮನವಿ ಸಲ್ಲಿಸಿದ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಕೊಲೆ ಘಟನೆ ಕರಿತು ಉನ್ನತ ಮಟ್ಟದ ತನಿಖೆ ಮಾಡಿಸಿ ನಿಜವಾದ ಕೊಲೆಗಾರರನ್ನು ಪತ್ತೆ ಹಚ್ಚ ಬೇಕು ನಿರಾಪರಾಧಿಯಾಗಿರುವ ಯುವಕ ಮತ್ತು ಆತನ ಮನೆಯವರನ್ನು ಬಿಡುಗಡೆ ಮಾಡಬೇಕು. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಮೇ
27ರಂದು ಯುವಕನ ಕುಟುಂಬದವರೊಂದಿಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರಮುಖರಾದ ಮಾನಪ್ಪ ಬಿಜಾಸ್ಪೂರ, ಮಹೇಶ ಯಾದಗಿರಿ, ತಿಪ್ಪಣ್ಣ, ಮಾನಪ್ಪ ಶೆಳ್ಳಗಿ, ಜೆಟ್ಟೆಪ್ಪ ನಾಗರಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next