Advertisement

ಕೇರಳದ ಬೆಸ್ತರ ಹತ್ಯೆ ಪ್ರಕರಣ: ಪರಿಹಾರ ಮೊತ್ತ ವಿಳಂಬಕ್ಕೆ ಸುಪ್ರೀಂ ಅಸಮಾಧಾನ

08:36 PM Apr 19, 2021 | Team Udayavani |

ನವದೆಹಲಿ: ಇಟಲಿಯ ನೌಕಾ ಸಿಬ್ಬಂದಿಯಿಂದ 2012ರಲ್ಲಿ ಕೇರಳದ ಇಬ್ಬರು ಮೀನುಗಾರರ ಹತ್ಯೆ ಪ್ರಕರಣವನ್ನು ಸೋಮವಾರವೇ ಸಮಾಪ್ತಿಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದ್ದು, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.

Advertisement

ಮೃತ ಮೀನುಗಾರರ ಕುಟುಂಬಕ್ಕೆ ಇಟಲಿ ಸರ್ಕಾರವು 10 ಕೋಟಿ ರೂ. ಪರಿಹಾರ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಆದೇಶಿಸಿತ್ತು. ಆದರೂ, ಹಣ ವರ್ಗಾವಣೆ ಪ್ರಕ್ರಿಯೆ ಮಾತ್ರ ನಡೆದಿರಲಿಲ್ಲ. ಸೋಮವಾರದ ವಿಚಾರಣೆ ವೇಳೆ ಕೇಂದ್ರ ಸರ್ಕಾರವು, “10 ಕೋಟಿ ರೂ. ಪರಿಹಾರ ಮೊತ್ತವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಇಟಲಿ ಸರ್ಕಾರ ಆರಂಭಿಸಿದೆ’ ಎಂದು ಮಾಹಿತಿ ನೀಡಿತು. ಜತೆಗೆ, ಇಂದೇ ಕೇಸನ್ನು ಸಮಾಪ್ತಿಗೊಳಿಸಿ ಎಂದು ಮನವಿ ಮಾಡಿತು.

ಆದರೆ, ಇನ್ನೂ ಪರಿಹಾರ ಮೊತ್ತವು ಜಮೆಯಾಗಿರದ ಕಾರಣ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, “ನೀವೆಷ್ಟು ವೇಗವಾಗಿ ಕೆಲಸ ಮಾಡುತ್ತೀರಿ ಎಂಬುದು ನಮಗೆ ಗೊತ್ತು’ ಎಂದು ಹೇಳಿ, ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ :18 ವರ್ಷಕ್ಕಿಂತ ಮೇಲ್ಪಟ್ಟವರೂ ಕೋವಿಡ್-19 ಲಸಿಕೆ ಪಡೆಯಲು ಅನುಮತಿಸಿದ ಕೇಂದ್ರ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next