Advertisement

26 ವಾರಗಳ ಭ್ರೂಣ ತೆಗೆಯಲು ಸುಪ್ರೀಂ ಅಸ್ತು

03:45 AM Jul 04, 2017 | Team Udayavani |

ನವದೆಹಲಿ: ಕೋಲ್ಕತ್ತಾದ ಮಹಿಳೆಗೆ ಆಕೆಯ 26 ವಾರಗಳ ಭ್ರೂಣವನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್‌ ಸೋಮವಾರ ಅನುಮತಿ ನೀಡಿದೆ.

Advertisement

ಆಕೆಯ ಭ್ರೂಣವು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮಗು ಹುಟ್ಟಿದರೆ ಅದಕ್ಕೆ ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕಾಗುತ್ತದೆ. ಇದರಿಂದ ತಾಯಿ ಕೂಡ ಮಾನಸಿಕವಾಗಿ ಖನ್ನತೆಗೆ ಒಳಗಾಗಬಹುದು ಎಂದು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಮಂಡಳಿ ಹೇಳಿತ್ತು.

ಇದನ್ನು ಪರಿಗಣಿಸಿದ ನ್ಯಾ.ದೀಪಕ್‌ ಮಿಶ್ರಾ ಹಾಗೂ ನ್ಯಾ.ಕೆ. ಖನ್ವಿಳ್ಕರ್‌ ನೇತೃತ್ವದ ಪೀಠ, ಮಹಿಳೆಯರ ಗರ್ಭಪಾತಕ್ಕೆ ಅನುಮತಿ ನೀಡಿತು. ಅಲ್ಲದೆ, ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲೇ ಕೂಡಲೇ ಗರ್ಭಪಾತದ ವ್ಯವಸ್ಥೆ ಮಾಡಿ ಎಂದು ವೈದ್ಯರಿಗೆ ಸೂಚಿಸಿತು. ಶಿಶು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಗರ್ಭಪಾತಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಮಹಿಳೆ ಮತ್ತು ಆಕೆಯ ಪತಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 7 ಮಂದಿ ವೈದ್ಯರ ಸಮಿತಿ ರಚಿಸಿ, ವರದಿ ನೀಡುವಂತೆ ಸುಪ್ರೀಂ ನಿರ್ದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next