Advertisement

ಅಗ್ನಿಪಥ ವಿರುದ್ಧದ ಅರ್ಜಿ ಸುಪ್ರೀಂಕೋರ್ಟ್‌ ನಲ್ಲಿ ಜು.15ಕ್ಕೆ ವಿಚಾರಣೆ

08:20 PM Jul 13, 2022 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ ಯೋಜನೆ ವಿರುದ್ಧ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಜು.15ರಂದು ವಿಚಾರಣೆ ನಡೆಯಲಿದೆ.

Advertisement

ಸರ್ಕಾರದ ಹೊಸ ಯೋಜನೆ ವಿರುದ್ಧ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ನ್ಯಾ.ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ.ಎ.ಎಸ್‌.ಬೋಪಣ್ಣ ನೇತೃತ್ವದ ನ್ಯಾಯಪೀಠ ಅದರ ವಿಚಾರಣೆ ನಡೆಸಲಿದೆ.

ಕೇಂದ್ರ ಸರ್ಕಾರ ಕೂಡ ತನ್ನ ವಾದವನ್ನು ಈ ನಿಟ್ಟಿನಲ್ಲಿ ಮೊದಲು ಆಲಿಸಬೇಕು ಎಂದು ಈಗಾಗಲೇ ಕೇವಿಯಟ್‌ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next