Advertisement

ಪೆಗಾಸಸ್‌ ವಿವಾದ: ಪ.ಬಂಗಾಳಕ್ಕೆ ಮುಖಭಂಗ; ಸಮಿತಿಯ ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ

08:14 PM Dec 17, 2021 | Team Udayavani |

ನವದೆಹಲಿ: ಪೆಗಾಸಸ್‌ ಗೂಢಚರ್ಯೆ ವಿವಾದಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ಸರ್ಕಾರ ನಿವೃತ್ತ ನ್ಯಾ.ಎಂ.ಬಿ.ಲೋಕೂರ್‌ ನೇತೃತ್ವದ ಸಮಿತಿ ವತಿಯಿಂದ ನಡೆಸುತ್ತಿದ್ದ ತನಿಖೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಜತೆಗೆ ಸಮಿತಿ ನಡೆಸುತ್ತಿರುವ ತನಿಖೆಯ ಬಗ್ಗೆಯೂ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿದೆ.

ಹಿಂದಿನ ವಿಚಾರಣೆ ವೇಳೆ, ಪಶ್ಚಿಮ ಬಂಗಾಳ ಸರ್ಕಾರ ಆಯೋಗ ತನಿಖೆ ಮುಂದುವರಿಸುವುದಿಲ್ಲ ಎಂದು ವಾಗ್ಧಾನ ಮಾಡಿದ್ದರೂ, ಅದನ್ನು ಪಾಲಿಸದೇ ಇರುವುದಕ್ಕೆ ಸಿಜೆಐ ಕಟುವಾಗಿ ಆಕ್ಷೇಪ ಮಾಡಿದ್ದಾರೆ.

“ಹಿಂದಿನ ವಿಚಾರಣೆ ವೇಳೆ, ಆಯೋಗ ತನಿಖೆ ಮುಂದುವರಿಸುವುದಿಲ್ಲ ಎಂದು ಹೇಳಿದ್ದೀರಿ. ಅಂಥದ್ದೇನೂ ಆಗಿಲ್ಲ. ಇದೆಂಥಾ ಬೆಳವಣಿಗೆ’ ಎಂದು ಪ್ರಶ್ನಿಸಿ , ಸಮಿತಿಯ ತನಿಖೆಗೆ ತಡೆಯಾಜ್ಞೆ ತಂದಿದ್ದಾರೆ.

ಇದನ್ನೂ ಓದಿ:ಹಣಕ್ಕಾಗಿ ಒಡಹುಟ್ಟಿದ ತಂಗಿಯನ್ನೇ ಮದುವೆಯಾದ ಅಣ್ಣ!

Advertisement

ಅ.27ರಂದು ಸುಪ್ರೀಂಕೋರ್ಟ್‌ ನೀಡಿದ್ದ ಆದೇಶದಲ್ಲಿ ಸುಪ್ರೀಂಕೋರ್ಟ್‌ ಸ್ವತಂತ್ರ ಸಮಿತಿ ನೇಮಕ ಮಾಡಿ ಆದೇಶ ನೀಡಿತ್ತು.

ಮತ್ತೊಂದೆಡೆ, ರಾಜ್ಯಪಾಲ ಜಗದೀಪ್‌ ಧನ್ಕರ್‌ ಕೂಡ ಪೆಗಾಸಸ್‌ ವಿಚಾರವಾಗಿ ತಮಗೆ ಅಪೂರ್ಣ ಮತ್ತು ಸರ್ಕಾರಕ್ಕೆ ಬೇಕಾದ ಮಾಹಿತಿ ನೀಡಲಾಗಿದೆ ಎಂದೂ ದೂರಿದ್ದಾರೆ.

ಜತೆಗೆ ಡಿ.18ರೊಳಗಾಗಿ ಪೂರ್ಣ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಎಚ್‌.ಕೆ.ದ್ವಿವೇದಿ ಅವರಿಗೆ ಆದೇಶಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next