Advertisement

PIL: ಧಾರ್ಮಿಕ ಮತಾಂತರ ತಡೆ ಕೋರಿ ಪಿಐಎಲ್‌ ಸಲ್ಲಿಕೆ; ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

03:10 PM Sep 06, 2023 | Team Udayavani |

ನವದೆಹಲಿ: ದೇಶದಲ್ಲಿನ ಧಾರ್ಮಿಕ ಮತಾಂತರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಬುಧವಾರ (ಸೆಪ್ಟೆಂಬರ್‌ 06) ನಿರಾಕರಿಸಿದೆ.

Advertisement

ಇದನ್ನೂ ಓದಿ:Panaji: ಬಾರ್ಜ್ ನ ಮುಂಭಾಗದ ಕಬ್ಬಿಣದ ತಗಡು ಮುರಿದು ಬಿದ್ದು ಪ್ರಯಾಣಿಕರ ಪರದಾಟ

“ಈ ವಿಚಾರದಲ್ಲಿ ನ್ಯಾಯಾಲಯ ಏಕೆ ಮಧ್ಯಪ್ರವೇಶಿಸಬೇಕು? ನ್ಯಾಯಾಲಯ ಸರ್ಕಾರಕ್ಕೆ ಹೇಗೆ ರಿಟ್‌ ಜಾರಿಗೊಳಿಸಲು ಸಾಧ್ಯ ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌ ಮತ್ತು ಜಸ್ಟೀಸ್‌ ಜೆ.ಬಿ.ಪರ್ಡಿವಾಲಾ , ಜಸ್ಟೀಸ್‌ ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.

ದೇಶದಲ್ಲಿ ಹಿಂದೂಗಳು ಮತ್ತು ಅಲ್ಪಸಂಖ್ಯತ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಮತಾಂತರಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ಮೂಲದ ಪಿಐಎಲ್‌ ಅರ್ಜಿದಾರ ಜೇರೋಮ್‌ ಆನ್ಟು ಅವರ ಪರ ವಕೀಲರು ಸುಪ್ರೀಂ ಪೀಠಕ್ಕೆ ತಿಳಿಸಿದ್ದರು.

ಒಂದು ವೇಳೆ ಈ ಸಮಸ್ಯೆ ಇನ್ನೂ ಜೀವಂತವಾಗಿದ್ದರೆ ಮತ್ತು ಈ ವಿಷಯದಲ್ಲಿ ಯಾರನ್ನಾದರೂ ವಿಚಾರಣೆಗೊಳಪಡಿಸಿದ್ದರೆ ಆ ಸಂದರ್ಭದಲ್ಲಿ ನಾವು ಮಧ್ಯಪ್ರವೇಶಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್‌ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

Advertisement

ಇದ್ಯಾವ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ? ಈಗ ಪ್ರತಿಯೊಬ್ಬರಿಗೂ ಇಂತಹ ವಿಷಯಗಳಲ್ಲಿ ಪಿಐಎಲ್‌ ಸಲ್ಲಿಸುವುದು ಒಂದು ಅಸ್ತ್ರವಾಗಿಬಿಟ್ಟಿದೆ ಎಂದು ಸುಪ್ರೀಂಕೋರ್ಟ್‌ ಅಸಮಧಾನವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next