Advertisement

ಶಬರಿಮಲೆ ತೀರ್ಪಿಗೆ ಜಯಮಾಲಾ ಹರ್ಷ; ಸಚಿವೆ ಹೇಳಿದ್ದೇನು ? 

12:47 PM Sep 28, 2018 | Team Udayavani |

ಬೆಂಗಳೂರು: ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸಚಿವೆ ಜಯಮಾಲಾ ಅವರು ಸ್ವಾಗತಿಸಿ ಸಂಭ್ರಮ  ಹೊರಹಾಕಿದ್ದಾರೆ. 

Advertisement

ತೀರ್ಪು ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಮಾಲಾ  ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು. ಸಂವಿಧಾನ ಬರೆದವರಿಗೆ ನನ್ನ ಕೋಟಿ ಕೋಟಿ ನಮನಗಳು. ಇದೊಂದು ಐತಿಹಾಸಿಕ ಕ್ಷಣ ಎಂದು ಸಂತಸ ಹೊರ ಹಾಕಿದರು. 

ದೇವರು ನಮಗೆ ಎಂದಿಗೂ ತಾರತಮ್ಯ ಮಾಡಿಲ್ಲ.ಆದರೆ ತಾರತಮ್ಯ ಧೋರಣೆಯಿಂದ ಮಹಿಳೆಯರು ತೀವ್ರವಾಗಿ ನೊಂದುಕೊಂಡಿದ್ದರು ಎಂದರು. 

1987 ರಲ್ಲಿ ಶಬರಿಮಲೆ ದೇವಾಲಯದ ಗರ್ಭಗುಡಿಯನ್ನು ನಾನು ಪ್ರವೇಶಿಸಿದ್ದೆ ಎಂದು ಹೇಳಿಕೊಂಡಿದ್ದ ನಟಿ ಜಯಮಾಲಾ ವಿರುದ್ದ ಭಾರೀ ಟೀಕೆಗಳೂ ಕೇಳಿ ಬಂದಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next