Advertisement

ಅರಾವಳಿಯಲ್ಲಿ ಗಣಿಗಾರಿಕೆ ಸ್ಥಗಿತಕ್ಕೆ ಆದೇಶ

07:40 AM Oct 24, 2018 | Team Udayavani |

ಹೊಸದಿಲ್ಲಿ: ರಾಜಸ್ಥಾನದ ಅರಾವಳಿ ಪ್ರದೇಶದಲ್ಲಿ 31 ಪರ್ವತಗಳು ಕಣ್ಮರೆಯಾಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಆಘಾತ ವ್ಯಕ್ತಪಡಿಸಿದೆ. ಜತೆಗೆ, 48 ಗಂಟೆಗಳ ಒಳಗೆ 115.34 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಖಡಕ್‌ ಸೂಚನೆಯನ್ನೂ ನೀಡಿದೆ. ಅರಾವಳಿಯಲ್ಲಿ ಗಣಿಗಾರಿಕೆಯಿಂದಾಗಿ ರಾಜಸ್ಥಾನ ಸರಕಾರಕ್ಕೆ 5 ಸಾವಿರ ಕೋಟಿ ರೂ. ರಾಯಧನ ಬರಬಹುದು. ಆದರೆ, ಅದರಿಂದ ದೆಹಲಿಯಲ್ಲಿನ ಲಕ್ಷಾಂತರ ಜನರ ಬದುಕು ಅಪಾಯಕ್ಕೆ ಸಿಲುಕಬಾರದು ಎಂದಿದೆ ಕೋರ್ಟ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next