Advertisement

ಹಣ ವಂಚನೆ: ರಜನೀಕಾಂತ್‌ ಪತ್ನಿ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

07:00 PM Jul 10, 2018 | udayavani editorial |

ಚೆನ್ನೈ : ಸೂಪರ್‌ ಸ್ಟಾರ್‌ ರಜನೀಕಾಂತ್‌ ಅವರ ಪತ್ನಿ ಲತಾ ರಜನೀಕಾಂತ್‌ ಅವರನ್ನು ವಂಚನೆ ಆರೋಪಕ್ಕೆ ಸಂಬಂಧಿಸಿ ವಿಚಾರಣೆಗೆ ಗುರಿಪಡಿಸಲು ಸರ್ವೋಚ್ಚ ನ್ಯಾಯಾಲಯ ಇಂದು ಮಂಗಳವಾರ ಆದೇಶಿಸಿದೆ.

Advertisement

ರಜನೀಕಾಂತ್‌ ಪತ್ನಿ ಲತಾ ಅವರು ಜಾಹೀರಾತು ಸಂಸ್ಥೆಯೊಂದಕ್ಕೆ 6.20 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದಾರೆ ಎನ್ನಲಾಗಿದ್ದು ಆ ಪ್ರಕರಣದಲ್ಲಿ ಲತಾ ಅವರ ವಿರುದ್ಧ ತನಿಖೆ ನಡೆಯಲಿದೆ. 

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ಪೀಠ, ಲತಾ ಅವರ ತನಿಖೆಗೆ ಆದೇಶಿಸಿದೆ.

ಇದಕ್ಕೂ ಮೊದಲು ಕರ್ನಾಟಕ ಹೈಕೋರ್ಟ್‌ ಈ ಪ್ರಕರಣದಲ್ಲಿ ಲತಾ ವಿರುದ್ಧದ ವಿಚಾರಣೆಗೆ ತಡೆ ನೀಡಿತ್ತು. ಇದು ಹಣ ವಂಚನೆ ಪ್ರಕರಣ ಅಲ್ಲ; ಬದಲು ಒಪ್ಪಂದದ ಉಲ್ಲಂಘನೆ ಮಾತ್ರವೇ ಆಗಿದೆ ಎಂದು ಹೈಕೋರ್ಟ್‌ ಹೇಳಿತ್ತು. 

Advertisement

ಆ ಬಳಿಕ ಈ ವಿವಾದ ಸುಪ್ರೀಂ ಮೆಟ್ಟಲೇರಿತ್ತು. ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸದ್ಯ ಸವೋಚ್ಚ ನ್ಯಾಯಾಲಯ ರದ್ದು ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next