Advertisement

TN Former Minister Senthil Balaji ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್‌

09:39 PM Aug 07, 2023 | Team Udayavani |

ನವದೆಹಲಿ:ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಇ.ಡಿ.ಯಿಂದ ಬಂಧಿತರಾಗಿರುವ ತಮಿಳುನಾಡು ಮಾಜಿ ಸಚಿವ ವಿ.ಸೆಂಥಿಲ್‌ ಬಾಲಾಜಿ ಮತ್ತು ಅವರ ಪತ್ನಿ ಮಂಗಳ ಅವರ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

Advertisement

ಇಬ್ಬರು ಕೂಡ ಕೇಂದ್ರ ತನಿಖಾ ಸಂಸ್ಥೆ ಅವರ ಬಂಧನವನ್ನು ಎತ್ತಿ ಹಿಡಿದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.

ಆದರೆ, ಆ.12ರ ವರೆಗೆ ಬಾಲಾಜಿ ಅವರಿಗೆ ಇ.ಡಿ.ಕಸ್ಟಡಿಯಿಂದ ವಿನಾಯಿತಿ ನೀಡಿದೆ. ಮತ್ತೂಂದು ಬೆಳವಣಿಗೆಯಲ್ಲಿ ಮೊದಲ 15 ದಿನಗಳಿಂದ ಹೆಚ್ಚು ಕಾಲ ಪೊಲೀಸ್‌ ವಶದಲ್ಲಿ ಇರಿಸುವಂತಿಲ್ಲ ಎಂಬ ಮಾಜಿ ಸಚಿವರ ವಾದವನ್ನು ನ್ಯಾ.ಎ.ಎಸ್‌.ಬೋಪಣ್ಣ ಮತ್ತು ನ್ಯಾ.ಎಂ.ಎಂ.ಸುಂದರೇಶ್‌ ಅವರನ್ನೊಳಗೊಂಡ ನ್ಯಾಯಪೀಠ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next