Advertisement

5 ಹೈಕೋರ್ಟ್‌ ಜಡ್ಜ್ ಗಳ ಬಡ್ತಿಗೆ ಕೊಲಿಜಿಯಂ ಶಿಫಾರಸು

10:28 PM Dec 13, 2022 | Team Udayavani |

ನವದೆಹಲಿ: ಕೊಲಿಜಿಯಂ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ನಡುವೆ ಬಹಿರಂಗ ವಾಗ್ವಾದ ಹೆಚ್ಚಾದ ನಂತರ, ಇದೇ ಮೊದಲ ಬಾರಿಗೆ ಮಂಗಳವಾರ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದಲ್ಲಿ ಕೊಲಿಜಿಯಂ ಸಭೆ ನಡೆದಿದೆ.

Advertisement

ಐವರು ಹೈಕೋರ್ಟ್‌ ಜಡ್ಜ್ ಗಳಿಗೆ ಬಡ್ತಿ ನೀಡುವಂತೆ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ. ರಾಜಸ್ಥಾನ ಹೈಕೋರ್ಟ್‌ ಸಿಜೆ ಪಂಕಜ್‌ ಮಿತ್ತಲ್‌, ಪಾಟ್ನಾ ಹೈಕೋರ್ಟ್‌ ಸಿಜೆ ಸಂಜಯ್‌ ಕರೋಲ್‌, ಮಣಿಪುರ ಹೈಕೋರ್ಟ್‌ ಸಿಜೆ ಪಿ.ವಿ.ಸಂಜಯ್‌ ಕುಮಾರ್‌, ಪಾಟ್ನಾ ಹೈಕೋರ್ಟ್‌ನ ನ್ಯಾ.ಅಹ್ಸಾನುದ್ದೀನ್‌ ಅಮಾನುಲ್ಲಾ, ಅಲಹಾಬಾದ್‌ ಹೈಕೋರ್ಟ್‌ನ ಜಡ್ಜ್ ಮನೋಜ್‌ ಮಿಶ್ರಾರಿಗೆ ಬಡ್ತಿ ನೀಡಿ ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ.

ಕಳೆದ ತಿಂಗಳು ಕೊಲಿಜಿಯಂ 10 ಜಡ್ಜ್ ಗಳ ಬಡ್ತಿಗೆ ಮಾಡಿದ್ದ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next