Advertisement

ಮೃತನ ಕುಟುಂಬಕ್ಕೆ ಹೆಚ್ಚುವರಿ ಪರಿಹಾರ

01:16 AM May 22, 2020 | Sriram |

ಹೊಸದಿಲ್ಲಿ: ಮಂಗಳೂರಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ದುರಂತದಲ್ಲಿ ಮಡಿದಿದ್ದ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಹೆಚ್ಚುವರಿ ಪರಿಹಾರ ಒದಗಿಸುವಂತೆ ಆದೇಶಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

Advertisement

ದುರಂತದಲ್ಲಿ ಮೃತಪಟ್ಟಿದ್ದ 45 ವರ್ಷದ ಮಹೇಂದ್ರ ಕೋಡ್ಕಣಿ ಅವರ ಕುಟುಂಬಕ್ಕೆ 7.64 ಕೋಟಿ ರೂ. ಪರಿಹಾರ ನೀಡುವಂತೆ ಏರ್‌ ಇಂಡಿಯಾ ಸಂಸ್ಥೆಗೆ ನ್ಯಾ| ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾ| ಅಜಯ್‌ ರಸ್ತೋಗಿ ಅವರನ್ನೊಳಗೊಂಡ ಸು.ಕೋ. ನ್ಯಾಯಪೀಠ ಸೂಚಿಸಿದೆ.ಮಹೇಂದ್ರ ಕೋಡ್ಕಣಿ ಯುಎಇ ಮೂಲದ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಅವರ ಸಾವಿನ ಅನಂತರ ಪತ್ನಿ, ಮಗಳು ಮತ್ತು ಮಗನಿಗೆ 7.35 ಕೋಟಿ ರೂ. ಪರಿಹಾರ ಘೋಷಿಸಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಆದೇಶ ಹೊರಡಿಸಿತ್ತು. ಪ್ರಕರಣ ಸಂಬಂಧ ತೀರ್ಪು ನೀಡಿದ ನ್ಯಾಯಪೀಠವು ಮಹೇಂದ್ರ ಅವರಿಗೆ ಸಲ್ಲಬೇಕಾದ ಪರಿಹಾರದ ಲೆಕ್ಕಾಚಾರದ ವೇಳೆ ಅವರ ವೇತನದ ಮೊತ್ತದಿಂದ ಹಣ ಕಡಿತಗೊಳಿಸಿರುವುದು ಮತ್ತು ಅದಕ್ಕೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ನೀಡಿರುವ ಕಾರಣವು ಒಪ್ಪತಕ್ಕದ್ದಲ್ಲ ಎಂದಿದೆ. ಹೀಗಾಗಿ ಮಹೇಂದ್ರ ಅವರ ಕುಟುಂಬಕ್ಕೆ ಈಗ ನೀಡಿರುವ 7.35 ಕೋಟಿ ರೂ. ಪರಿಹಾರವನ್ನು 7.64 ಕೋಟಿ ರೂ.ಗಳಿಗೆ ಏರಿಕೆ ಮಾಡುತ್ತಿದ್ದೇವೆ. ಈಗ ಅವರಿಗೆ 7.64 ಕೋಟಿ ರೂ. ಪರಿಹಾರ ಮೊತ್ತ ಮತ್ತು ಹೆಚ್ಚುವರಿ ಮೊತ್ತಕ್ಕೆ ವಾರ್ಷಿಕ ಶೇ.9 ಬಡ್ಡಿ ಸಮೇತ ಪಾವತಿಸಬೇಕು ಎಂದು ಸು.ಕೋರ್ಟ್‌ ಏರ್‌ ಇಂಡಿಯಾಗೆ ನಿರ್ದೇಶಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next