Advertisement

ಬಾಬ್ರಿ ಧ್ವಂಸ ಕೇಸು: 9 ತಿಂಗಳಲ್ಲಿ ತೀರ್ಪಿಗೆ ಆದೇಶ

01:13 AM Jul 20, 2019 | mahesh |

ನವದೆಹಲಿ: ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ- ರಾಮಮಂದಿರ ಕಟ್ಟಡ ಧ್ವಂಸ ಪ್ರಕರಣದ ಬಗೆಗಿನ ವಿಚಾರಣೆಯನ್ನು 9 ತಿಂಗಳಲ್ಲಿ ಪೂರ್ತಿಗೊಳಿಸಬೇಕು. ಅದಕ್ಕೆ ಸಂಬಂಧಿಸಿದಂತೆ ನ್ಯಾಯಯಮೂರ್ತಿಗಳ ಸೇವಾವಧಿ ವಿಸ್ತರಿಸುವ ಬಗ್ಗೆ ಸೂಕ್ತ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ನಾಲ್ಕು ವಾರಗಳಲ್ಲಿ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾ.ಆರ್‌.ಎಫ್.ನಾರಿಮನ್‌ ಮತ್ತು ನ್ಯಾ.ಸೂರ್ಯಕಾಂತ್‌ರನ್ನೊಳಗೊಂಡ ನ್ಯಾಯಪೀಠ ಶುಕ್ರವಾರ ಆದೇಶ ನೀಡಿದೆ.

Advertisement

ಸಂವಿಧಾನದಲ್ಲಿ ಉಲ್ಲೇಖವಾಗಿರುವ 142ನೇ ವಿಧಿಯನ್ವಯ ನ್ಯಾಯಪೀಠ ಈ ಆದೇಶ ನೀಡಿದೆ. ಒಂಬತ್ತು ತಿಂಗಳ ಅವಧಿಯಲ್ಲಿ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆ ಪೂರ್ತಿಯಾಗಬೇಕು. ಶುಕ್ರವಾರದಿಂದ ಮೊದಲ್ಗೊಂಡ ಆರು ತಿಂಗಳ ಒಳಗಾಗಿ ಪ್ರಾಸಿಕ್ಯೂಷನ್‌ ಮತ್ತು ಡಿಫೆನ್ಸ್‌ ಸಾಕ್ಷ್ಯಗಳಿಂದ ಹೇಳಿಕೆ ಪಡೆದು ಪೂರ್ತಿಗೊಳಿಸಬೇಕು. ಜತೆಗೆ ಮೌಖೀಕ ವಾದ ಮಿತಿಗೊಳಿಸಿ, ಲಿಖೀತ ವಾದ ಮಂಡನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆದೇಶ ನೀಡಿದೆ. ವಿಶೇಷ ಕೋರ್ಟ್‌ ನ್ಯಾಯಾಧೀಶ ಎಸ್‌.ಪಿ. ಯಾದವ್‌ ಸೆ.30ರಂದು ನಿವೃತ್ತಿಯಾಗುವುದಾಗಿ ಮೇ 25ರಂದು ಪತ್ರ ಬರೆದಿದ್ದರು. ಹೀಗಾಗಿ, ಅವಧಿ ವಿಸ್ತರಿಸುವಂತೆ ಕೋರಿಕೊಂಡಿದ್ದರಿಂದ ಸುಪ್ರೀಂಕೋರ್ಟ್‌ ಈ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next