Advertisement

ವನ್ಯಜೀವಿ ಕಾರಿಡಾರ್‌: ಸಲಹೆಗಳನ್ನು ಪರಿಶೀಲಿಸಿ

09:40 AM Aug 05, 2017 | Team Udayavani |

ಹೊಸದಿಲ್ಲಿ: ಆನೆ ಮತ್ತು ಇತರ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸುರಕ್ಷತೆಗಾಗಿ ದೇಶಾದ್ಯಂತ 27 ಕಾರಿಡಾರ್‌ ನಿರ್ಮಾಣ ಸೇರಿದಂತೆ ಇತರೆ ಸಲಹೆಗಳನ್ನು ಸ್ವೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. 3 ತಿಂಗಳ ಒಳಗೆ ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಪರಿಸರ ತಜ್ಞ ವೈದ್ಯ ಆತ್ರೇಯ ಮತ್ತಿತರರ ಪರವಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ನ್ಯಾಯವಾದಿ ಶ್ಯಾಮ್‌ ದಿವಾನ್‌ ವನ್ಯಜೀವಿ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next