Advertisement

ಎ.ಜಿ. ನೆರವು ಕೋರಿದ ಸುಪ್ರೀಂ

01:01 AM Jul 20, 2019 | mahesh |

ನವದೆಹಲಿ: ರಾಜ್ಯವಾರು ಜನಸಂಖ್ಯೆಯ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ನಿರ್ಧರಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಶುಕ್ರವಾರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ನೆರವು ಕೋರಿದೆ. ರಾಷ್ಟ್ರ ಮಟ್ಟದಲ್ಲಿ ಇರುವ ಜನಸಂಖ್ಯೆಯ ಮಾಹಿತಿ ಆಧಾರದಲ್ಲಿ ಅಲ್ಪಸಂಖ್ಯಾತರು ಎಂದು ನಿರ್ಧರಿಸುವುದರ ಬಗ್ಗೆ ಆಕ್ಷೇಪವೆತ್ತಿ ಬಿಜೆಪಿ ನಾಯಕ, ನ್ಯಾಯವಾದಿ ಅಶ್ವಿ‌ನಿ ಕುಮಾರ್‌ ಪಿಐಎಲ್ ಸಲ್ಲಿಸಿದ್ದರು. ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌, ಬೌದ್ಧ ಮತ್ತು ಪಾರ್ಸಿ ಸಮುದಾಯದವರನ್ನು ಅಲ್ಪಸಂಖ್ಯಾತರು ಎಂದು 26 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಘೋಷಣೆ ಮಾಡಿ ಹೊರಡಿಸಿದ್ದ ಆದೇಶವನ್ನು ಅವರು ಪ್ರಶ್ನಿಸಿದ್ದಾರೆ. ರಾಜ್ಯವಾರು ಜನಸಂಖ್ಯೆ ಆಧಾರದಲ್ಲಿ ಅಲ್ಪಸಂಖ್ಯಾತರು ಯಾರು ಎನ್ನುವುದನ್ನು ನಿರ್ಧರಿಸುವುದರ ಬಗ್ಗೆ ಆದೇಶ ಹೊರಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next