Advertisement

ಗಾಂಧಿ ಹತ್ಯೆ ಮರುತನಿಖೆ: ಅಮಿಕಸ್‌ ಕ್ಯೂರಿ ನೇಮಕ

10:35 AM Oct 07, 2017 | Karthik A |

ಹೊಸದಿಲ್ಲಿ: ಮಹಾತ್ಮ ಗಾಂಧಿ ಅವರ ಹತ್ಯೆ ಪ್ರಕರಣದ ಮರುತನಿಖೆ ನಡೆಸುವಂತೆ ಸಲ್ಲಿಸಲಾದ ಮನವಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ಒಂದಿಷ್ಟು ಮಹತ್ವದ ಪ್ರಶ್ನೆಗಳನ್ನು ಎತ್ತಿದೆ. ಅಲ್ಲದೆ, ಅದಕ್ಕೆ ಸಂಬಂಧಿಸಿ ಅಮಿಕಸ್‌ ಕ್ಯೂರಿಯನ್ನು ನೇಮಕ ಮಾಡಿದೆ.

Advertisement

15 ನಿಮಿಷ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಬಳಿಕ ಈ ಬಗ್ಗೆ ಮಾಹಿತಿ ನೀಡಿದೆ. ಹಿರಿಯ ನ್ಯಾಯವಾದಿ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮರೇಂದರ್‌ ಶರಣ್‌ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಕ ಮಾಡಿರುವುದಾಗಿ ತಿಳಿಸಿದೆ. “ಕಾನೂನಿನ ವ್ಯಾಪ್ತಿಯಲ್ಲಿ  ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ’ ಎಂಬರ್ಥದಲ್ಲೂ ನ್ಯಾಯಪೀಠ ಮಾತನಾಡಿದೆ. ಬಳಿಕ ಮಾತನಾಡಿದ ಅಮ್ರಿಂದರ್‌ ಶರಣ್‌, ಪ್ರಕರಣದ ಎಲ್ಲಾ ಮಾಹಿತಿಗಳ ಮೌಲ್ಯಮಾಪನ ನಡೆಸುವುದಾಗಿ ಹೇಳಿದ್ದಾರೆ. ಮುಂಬಯಿ ಮೂಲದ ಅಭಿನವ್‌ ಭಾರತ್‌ನ ಟ್ರಸ್ಟಿ ಆಗಿರುವ ಡಾ|ಪಂಕಜ್‌ ಫ‌ಡ್ನಿಸ್‌ ಎಂಬವರು ಅರ್ಜಿದಾರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next