Advertisement

ಪ್ರಮಾಣ ವಚನ ತಡೆ ಅರ್ಜಿ ವಿಚಾರಣೆಗೆ ಸುಪ್ರಿಂ ಅಸ್ತು

01:28 AM May 17, 2018 | Team Udayavani |

ನವದೆಹಲಿ: ಇಂದು ಬೆಳಗ್ಗೆ (ಗುರುವಾರ) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿರುವ ಬಿ.ಜೆ.ಪಿ.ಯ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಪ್ರಮಾಣವಚನ ಸಮಾರಂಭಕ್ಕೆ ತಡೆ ನೀಡಬೇಕು ಎಂದು ಕೋರಿ ಜೆ.ಡಿ.ಎಸ್‌. ಮತ್ತು ಕಾಂಗ್ರೆಸ್‌ ಪ್ರತ್ಯೇಕವಾಗಿ ಸಲ್ಲಿಸಿರುವ ಎರಡು ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರಿಂ ಕೋರ್ಟ್‌ ಅಸ್ತು ಎಂದಿದೆ. ಜಸ್ಟೀಸ್‌ ಸಿಕ್ರಿ, ಜಸ್ಟೀಸ್‌ ಭೂಷಣ್‌, ಜಸ್ಟೀಸ್‌ ಬೋಬ್ದೆ ಇವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ.

Advertisement

ಸುಪ್ರಿಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಅರ್ಜಿ ವಿಚಾರಣೆಗೆ ಸಮ್ಮತಿ ಸೂಚಿಸಿದ್ದು ಸುಪ್ರಿಂ ಕೋರ್ಟ್‌ ಕೊಠಡಿ ಸಂಖ್ಯೆ 2ರಲ್ಲಿ ಈ ಅರ್ಜಿಗಳ ವಿಚಾರಣೆ ನಡೆಯಲಿದ್ದು. ಬಿ.ಜೆ.ಪಿ. ಪರ ವಕೀಲ ತುಷಾರ್‌ ಮೆಹ್ತಾ ಮತ್ತು ಕಾಂಗ್ರೆಸ್‌ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ವಾದ ಮಂಡಿಸಲಿದ್ದಾರೆ. 1.45ರ ಸುಮಾರಿಗೆ ವಾದ ಮಂಡನೆ ಪ್ರಾರಂಭವಾಗುವ ನಿರೀಕ್ಷೆಯಿದೆ.

1.45 AM: ಈ ನಡುವೆ ಸಂಸತ್‌ ಎದುರು ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕ ಸರಕಾರ ರಚನೆಯ ಹೈಡ್ರಾಮ ಬೆಂಗಳೂರಿನಿಂದ ದೇಶ ರಾಜಧಾನಿಗೆ ವರ್ಗವಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next