Advertisement

ಅನರ್ಹರ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ

11:26 AM Aug 29, 2019 | Team Udayavani |

ನವದೆಹಲಿ: ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ರಿಂದ ಅನರ್ಹಗೊಂಡಿರುವ 15 ಮಂದಿ ಶಾಸಕರ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಮಂಗಳವಾರ ಒಪ್ಪಿಕೊಂಡಿದೆ.

Advertisement

ನಿಕಟಪೂರ್ವ ಸ್ಪೀಕರ್‌ ಶಾಸಕರಿಂದ ರಾಜೀನಾಮೆ ತಿರಸ್ಕಾರ ಮತ್ತು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿ ಸಬೇಕು ಎಂದು ಅನರ್ಹಗೊಂಡ ಶಾಸಕರ ಪರ ವಕೀಲರಾದ ವಿ.ಗಿರಿ ಮತ್ತು ಸುಭ್ರಾಂಶು ಪಧಿ ಮಂಗಳವಾರ ನ್ಯಾ.ಎನ್‌. ವಿ.ರಮಣ, ನ್ಯಾ.ಮೋಹನ ಎಂ.ಶಾಂತನಗೌಡರ್‌, ನ್ಯಾ.ಅಜಯ ರಸ್ತೋಗಿ ಅವರನ್ನೊಳಗೊಂಡ ನ್ಯಾಯ ಪೀಠದ ಮುಂದೆ ಮನವಿ ಮಾಡಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಸುಪ್ರೀಂ ರಿಜಿಸ್ಟ್ರಾರ್‌ಗೆ ಮನವಿಯನ್ನು ಪರಿಗಣಿಸುವಂತೆ ಮೌಖೀಕವಾಗಿ ಸೂಚನೆ ನೀಡಿತು. ಹೀಗಾಗಿ ಬುಧವಾರವೂ ವಿಚಾರಣೆಗಾಗಿ ಮತ್ತೆ ಮನವಿ ಮಾಡುವ ಸಾಧ್ಯತೆ ಇದೆ. ಸೋಮವಾರವಷ್ಟೇ ಸುಪ್ರೀಂ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next