Advertisement

Central Govt ನಿರ್ಧಾರಕ್ಕೆ ಸುಪ್ರೀಂ ಸಮ್ಮತಿ ಸ್ವಾಗತಾರ್ಹ: ಸಿ.ಟಿ.ರವಿ

07:36 PM Dec 11, 2023 | Team Udayavani |

ಚಿಕ್ಕಮಗಳೂರು:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು ಸ್ವಾಗತಾರ್ಹ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರ ಸರ್ಕಾರ 370 ವಿಧಿ ರದ್ದುಗೊಳಿಸಿದ ನಿರ್ಣಯವನ್ನು ನ್ಯಾಷನಲ್‌ ಕಾನ್‌ರೆನ್ಸ್‌, ಪಿಡಿಪಿ ಮತ್ತು ಕಾಂಗ್ರೆಸ್‌ ಪಕ್ಷ ಲೋಕಸಭೆ ಒಳಗೆ ಮತ್ತು ಹೊರಗೆ ವಿರೋಧ ಮಾಡಿದ್ದವು. ಕಾಂಗ್ರೆಸ್‌ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 370 ಪುನಃ ಅನುಷ್ಠಾನಗೊಳಿಸುವುದಾಗಿ ಹೇಳಿತ್ತು. ಈಗ ನ್ಯಾಯಾಲಯವೇ ಕೇಂದ್ರದ ನಿರ್ಧಾರಕ್ಕೆ ಸಮ್ಮತಿ ನೀಡಿದ್ದು, ಜಯ ಸಿಕ್ಕಂತಾಗಿದೆ.

ರಾಜ್ಯಾದ್ಯಂತ ಬರ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ರೈತರನ್ನು ಭಿಕ್ಷುಕರ ರೀತಿ ನೋಡುತ್ತಿದೆ. ಎರಡು ಸಾವಿರ ಕೊಡುವುದಾಗಿ ಹೇಳಿ ಇದುವರೆಗೂ ನೀಡಿಲ್ಲ. ಎರಡು ಸಾವಿರ ನೀಡಲು ರೈತರೇನು ಭೀಕ್ಷುಕರಾ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next