Advertisement

ಏಮ್ಸ್‌ ಹೋರಾಟಕ್ಕೆ ಕಾರ್ಮಿಕರ ಸಾಥ್‌

05:31 PM Aug 25, 2022 | Team Udayavani |

ರಾಯಚೂರು: ಜಿಲ್ಲಾ ಏಮ್ಸ್‌ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಮಿತಿ ಸದಸ್ಯರು ಪಾಲ್ಗೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

Advertisement

ಸಮಿತಿ ಅಧ್ಯಕ್ಷ ವೀರನಗೌಡ ಮಾತನಾಡಿ, ಪ್ರಸ್ತುತ ಏಮ್ಸ್‌ ಸಂಸ್ಥೆ ಸ್ಥಾಪಿತಗೊಂಡಲ್ಲಿ ಎಲ್ಲರಿಗಿಂತಲೂ ಹೆಚ್ಚಾಗಿ ಬಡವರಿಗೆ ಕೃಷಿ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರಿಗೆ ಹೆಚ್ಚು ಉಪಯುಕ್ತವಾಗಲಿದೆ. ಆದ್ದರಿಂದ ನಮ್ಮ ಆರೋಗ್ಯ ಮತ್ತು ಪ್ರಾಣ ರಕ್ಷಣೆಯಾಗುತ್ತದೆ. ಅದಕ್ಕಾಗಿ ಏಮ್ಸ್‌ ಸ್ಥಾಪಿಸುವವರೆಗೂ ನಾವು ಸಂಘಟಿತರಾಗಿ ಹೋರಾಡಲೇಬೇಕು ಎಂದು ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.

ಕಾರ್ಮಿಕ ಸಂಘಟನೆಯ ಮುಖಂಡ ಸೆಂಟ್ರಿಂಗ್‌ ಹನುಮಂತಪ್ಪ, ಕಟ್ಟಡ ಕಾರ್ಮಿಕ ಸಂಘದ ಸದಸ್ಯರಾದ ಎಸ್‌.ಮಹಾದೇವಪ್ಪ, ಅಬ್ರಾಹಂ, ಹನಮಂತು, ಭಾಸ್ಕರ್‌, ಶೇಖ್‌ ಸೈಫಾನ್‌, ನಾಗರಾಜ್‌, ನರಸಿಂಹಲು, ಮಲ್ಲೇಶ್‌, ಹುಸೇನಿ, ಆಂಜನೇಯ, ಅಹ್ಮದ್‌ ಮಹೇಶ್‌, ಮಹಾದೇವ, ಬೆಂಜಮಿನ್‌, ರಾಜು ಚೆನ್ನಿ, ಪ್ರಭಾಕರ್‌, ಸುನೀಲ್‌ ಕುಮಾರ್‌, ಶಂಶಾಲಪ್ಪ, ನರ್ಸಪ್ಪ, ಲಕ್ಷ್ಮಣ, ತಿಪ್ಪಣ್ಣ, ಸುನೀಲ್‌ ಕುಮಾರ್‌, ನಾಗರಾಜ್‌ ಮುಂತಾದ ನೂರಾರು ಕಾರ್ಮಿಕ ಹಾಗೂ ಏಮ್ಸ್‌ ಹೋರಾಟ ಸಮಿತಿಯ ಡಾ| ಬಸವರಾಜ ಕಳಸ, ಎಸ್‌. ಮಾರೆಪ್ಪ ವಕೀಲರು, ಅಶೋಕ್‌ ಕುಮಾರ್‌ ಜೈನ್‌ ಸೇರಿ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next