Advertisement

ಸರಕು ಸಾಗಣೆ ವಾಹನ ಮುಷ್ಕರಕ್ಕೆ  ಸಾಥ್‌

04:49 PM Jul 21, 2018 | Team Udayavani |

ಹುಬ್ಬಳ್ಳಿ: ಇಂಧನ ದರ ಇಳಕೆ, ರಾಷ್ಟ್ರಾವ್ಯಾಪಿ ಏಕರೂಪ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ದೇಶವ್ಯಾಪಿ ಕರೆ ನೀಡಿರುವ ಸರಕು ಸಾಗಾಣಿಕೆ ವಾಹನಗಳ ಮುಷ್ಕರಕ್ಕೆ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಇಲ್ಲಿನ ಗಬ್ಬೂರು ವೃತ್ತದಲ್ಲಿ ಸರಕು ಸಾಗಾಣಿಕೆ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ರಾಜ್ಯ ಸರಕಾರವೂ ಡೀಸೆಲ್‌ ದರ ಹೆಚ್ಚಳ ಮಾಡಿರುವುದು ಖಂಡನೀಯವಾಗಿದೆ. ಕೇಂದ್ರ ಸರಕಾರ ಕೂಡಲೇ ಟೋಲ್‌ ಮುಕ್ತ ಭಾರತ ಮಾಡಬೇಕು. ಥರ್ಡ್‌ಪಾರ್ಟಿ ವಿಮೆ ದರ ಕಡಿತಗೊಳಿಸಬೇಕು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪ್ರವಾಸಿ ವಾಹನಗಳಿಗೆ ಹಾಗೂ ಬಸ್‌ಗಳಿಗೆ ರಾಷ್ಟ್ರೀಯ ಪರವಾನಗಿ ನೀಡುವುದು ಸೇರಿದಂತೆ ಅಖಿಲ ಭಾರತ ಮೋಟಾರು ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ ಬೇಡಿಕೆಗಳನ್ನು ಕೇಂದ್ರ ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next