Advertisement

ಪ್ರತಾಪಗೌಡ ಪಾಟೀಲರನ್ನು ಬೆಂಬಲಿಸಿ

07:50 PM Mar 30, 2021 | Team Udayavani |

ಬಳಗಾನೂರು: ಏ 17 ರಂದು ನಡೆಯುವ ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅ ಧಿಕಾರಕ್ಕೆ ಬರಲು ಕಾರಣೀಭೂತರಾದ ಸರಳ ವ್ಯಕ್ತಿತ್ವದ ಹಿರಿಯ ನಾಯಕರೆನಿಸಿಕೊಂಡ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಅವರನ್ನು ಬೆಂಬಲಿಸಿ ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗೂರು ಹೇಳಿದರು.

Advertisement

ಪಟ್ಟಣದ ಬಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡ ಕೆಲಸ ಕಾರ್ಯಗಳು ಪ್ರತಾಪಗೌಡ ಪಾಟೀಲ್‌ ಅವರಿಗೆ ಶ್ರೀರಕ್ಷೇಯಾಗಿವೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೇ ಕೇವಲ ಪ್ರತಾಪಗೌಡ ಪಾಟೀಲ್‌ ಅವರ ಚುನಾವಣೆ ಅಲ್ಲ ಇದು, ಬೂತ್‌ಮಟ್ಟದಲ್ಲಿನ ಕಾರ್ಯಕರ್ತರ ನಡುವೆ ನಡೆವ ಚುನಾವಣೆ ಎಂದು ಪ್ರತಿಯೊಬ್ಬರು ತುಂಬ ಎಚ್ಚರಿಕೆಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಜಿಪಂ ಸದಸ್ಯ ಶಿವನಗೌಡ ಗೊರೇಬಾಳ ಮಾತನಾಡಿ, ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಕಾರ್ಯ ಪಕ್ಷದ ಗೌರವ ಮತ್ತು ಅಭ್ಯರ್ಥಿ ಗೆಲುವು ಸಾ ಧಿಸಲು ಪ್ರಮುಖವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೂತ್‌ಮಟ್ಟದ ಕಾರ್ಯಕರ್ತರ ಸಲಹೆ, ಸಹಕಾರ ಅವಶ್ಯಕವಾಗಿದ್ದು, ಅವರ ಮಾರ್ಗದರ್ಶನದಲ್ಲಿ ನಾವು ಕಾರ್ಯಚಟುವಟಿಕೆಗಳಲ್ಲಿ ತೊಡಗುವುದಾಗಿ ತಿಳಿಸಿದರು. ಸಿಂಧನೂರು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿ, ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸುವ ಮೂಲಕ ಕ್ಷೇತ್ರದಲ್ಲಿ ಪಟ್ಟದಿಂದ ಬಿಜೆಪಿಗೆ ಗರಿಷ್ಠ ಮುನ್ನಡೆ ಮತಗಳ ಕೊಡುಗೆ ನೀಡುವಲ್ಲಿ ಭಾಗಿಯಾಗಿ ಕ್ಷೇತ್ರದ ಗಮನ ಸೆಳೆಯೋಣ ಎಂದರು.

ಶೇಖರಪ್ಪ ಮೇಟಿ, ವಿರೂಪಣ್ಣ ಗುತ್ತೇದಾರ, ಹಂಸರಾಜ, ಮೆಹಬೂಬಮಂತ್ರಿ, ಯಂಕಣ್ಣ ತಿಪ್ಪನಟ್ಟಿ, ಟಿ.ಹನುಮಂತಪ್ಪ, ಅಮರಯ್ಯಸ್ವಾಮಿ, ಬಿ.ತಿಕ್ಕಯ್ಯ, ಎಚ್‌.ಮಹಾಬಳೇಶ, ಸೇರಿ ಮುಖಂಡರು, ಬಿಜೆಪಿ ಬೆಂಬಲಿತ ಪಪಂ ಸದಸ್ಯರು, ಬಿಜೆಪಿ ಘಟಕದ ಪದಾಧಿ ಕಾರಿಗಳು ಕಾರ್ಯಕರ್ತರು ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next