Advertisement

BJPಗೆ ಅಲ್ಲ,ವಿಪಕ್ಷಕ್ಕೆ ಬೆಂಬಲ: ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌

01:16 AM Jun 25, 2024 | Team Udayavani |

ಭುವನೇಶ್ವರ: ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಬೆಂಬಲ ನೀಡದೇ ಇರಲು ಬಿಜು ಜನತಾ ದಳ (ಬಿಜೆಡಿ) ನಿರ್ಧರಿಸಿದೆ. ಗುರುವಾರದಿಂದ ರಾಜ್ಯಸಭೆ ಅಧಿ ವೇಶನ ಶುರುವಾಗುವ ಹಿನ್ನೆಲೆ ಯಲ್ಲಿ ಭುವನೇಶ್ವರ ದಲ್ಲಿ ಪಕ್ಷದ ನಾಯಕ ನವೀನ್‌ ಪಟ್ನಾಯಕ್‌ ಪಕ್ಷದ 9 ರಾಜ್ಯಸಭೆ ಸಂಸದರ ಜತೆಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಬಲಿಷ್ಠ ವಿಪಕ್ಷವಾಗಿ ಗುರು ತಿಸಿಕೊಳ್ಳಬೇಕು ಎಂದೂ ಸಂಸದರಿಗೆ ನವೀನ್‌ ಪಟ್ನಾಯಕ್‌ ಸೂಚಿಸಿದ್ದಾರೆ. ಹಿಂದಿನ ಅವಧಿಗಳಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next