Advertisement

TDP ಸ್ಪೀಕರ್‌ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ: ಉದ್ಧವ್‌ ಪಕ್ಷ

12:32 AM Jun 17, 2024 | Team Udayavani |

ಮುಂಬಯಿ: ಟಿಡಿಪಿ ಲೋಕಸಭಾ ಸ್ಪೀಕರ್‌ ಚುನಾವಣೆಗೆ ಅಭ್ಯರ್ಥಿಯನ್ನು ನಿಲ್ಲಿಸುವುದಾದಲ್ಲಿ ವಿಪಕ್ಷ ಕೂಟವು ಟಿಡಿಪಿಗೆ ಎಲ್ಲ ಬೆಂಬಲ ನೀಡಲು ಪ್ರಯತ್ನಿಸುತ್ತದೆ ಎಂದು ಶಿವಸೇನಾ(ಯುಬಿಟಿ) ನಾಯಕ ಸಂಜಯ್‌ ರಾವುತ್‌ ಹೇಳಿದ್ದಾರೆ. ಸ್ಪೀಕರ್‌ ಚುನಾವಣೆ ಬಹಳ ನಿರ್ಣಾಯಕವಾಗಿದ್ದು, ಬಿಜೆಪಿ ಇಲ್ಲಿ ಗೆಲುವು ಪಡೆದರೆ ಸರಕಾರಕ್ಕೆ ಬೆಂಬಲ ಸೂಚಿಸುತ್ತಿರುವ ಟಿಡಿಪಿ, ಜೆಡಿಯು ಹಾಗೂ ಚಿರಾಗ್‌ ಪಾಸ್ವಾನ್‌, ಜಯಂತ್‌ ಚೌಧರಿಯಂತಹವರ ಸಂಘಟನೆಗಳನ್ನು ಮುರಿಯುತ್ತಾರೆ. ಬಿಜೆಪಿ ತನಗೆ ಬೆಂಬಲ ನೀಡಿದ ಪಕ್ಷಗಳಿಗೆ ಮೋಸ ಮಾಡುತ್ತದೆ. ನಮಗೆ ಈ ಅನುಭವವಿದೆ ಎಂದು ರಾವುತ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next