Advertisement

ಮದ್ಯದಂಗಡಿ ವಿರುದ್ಧ  ಪ್ರತಿಭಟನೆಗೆ ಬೆಂಬಲ, ನಿರ್ಣಯ

08:05 AM Jul 24, 2017 | Team Udayavani |

ನೆಲ್ಯಾಡಿ : ನೆಲ್ಯಾಡಿ  ಗ್ರಾ.ಪಂ. ಮಹಿಳಾ ಗ್ರಾಮಸಭೆಯು ಗ್ರಾ.ಪಂ. ಉಪಾಧ್ಯಕ್ಷೆ  ಉಮಾವತಿ ಅವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ  ನಡೆಯಿತು.

Advertisement

ಸಭೆಯಲ್ಲಿ  ವಿಷಯ ಪ್ರಸ್ತಾವಿಸಿದ ಗ್ರಾಮ ಸ್ಥೆಯೋರ್ವರು ಸುಪ್ರೀಂಕೋರ್ಟ್‌ ಆದೇಶದಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳು ಬಂದ್‌ ಆಗಿವೆ. ಆದರೆ ನೆಲ್ಯಾಡಿಯಲ್ಲಿನ ಮದ್ಯದಂಗಡಿಯೊಂದು ಅಡ್ಡದಾರಿ ಮಾಡಿಕೊಂಡು ಹಿಂಬಾಗಿಲ ಮೂಲಕ ಕಾರ್ಯಾಚರಿಸುತ್ತಿದೆ. ಇದರ ವಿರುದ್ಧ  ಇಲಾ ಖೆಗಳಿಗೆ ಮನವಿ ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಡ್ಡದಾರಿ ಮೂಲಕ ಮದ್ಯದಂಗಡಿಗೆ ಮದ್ಯ  ಕೊಳ್ಳಲು ಬರುವ ಸಾರ್ವಜನಿಕರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದನ್ನು ವಿರೋಧಿಸುತ್ತಿರುವ ನಮಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು. 

ಇದಕ್ಕೆ  ಗ್ರಾಮಸ್ಥರೂ ಧ್ವನಿಗೂಡಿಸಿ ಮದ್ಯದಂಗಡಿ ಬಂದ್‌ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮದ್ಯದಂಗಡಿ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ  ಆ. 2ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ ಈ ಪ್ರತಿಭಟನೆಗೆ ಬೆಂಬಲ ಸೂಚಿಸಲು ಸಭೆಯಲ್ಲಿದ್ದ ಮಹಿಳೆಯರು ಒತ್ತಾಯಿಸಿದ್ದು  ಈ ಬಗ್ಗೆ  ನಿರ್ಣಯ ಕೈಗೊಳ್ಳಲಾಯಿತು.

ಹಂದಿ ಸಾಕಾಣಿಕೆಯಿಂದ ತೊಂದರೆ
ಪಡ್ಡಡ್ಕದಲ್ಲಿ  ಹಂದಿ ಸಾಕಾಣಿಕೆ ಮಾಡುತ್ತಿರು ವುದರಿಂದ ಸಮೀಪದ ಮನೆಯವರಿಗೆ ದುರ್ವಾ ಸನೆಯಲ್ಲಿ   ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ರೋಗ ಹರಡುವ ಭೀತಿ ಇದೆ. ಈ ಬಗ್ಗೆ  ಹಂದಿ ಸಾಕಾಣಿಕೆದಾರರ ಗಮನಕ್ಕೆ ತಂದಾಗ ಅವರು ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ ಎಂದು ಮಹಿಳೆಯೋರ್ವರು ಸಭೆಯ ಗಮನಕ್ಕೆ ತಂದರು. 

ಆಗ್ರಹ
ನೆಲ್ಯಾಡಿ ಪೇಟೆ ಅಂಗನವಾಡಿ ಪಕ್ಕದಲ್ಲಿರುವ ಸರಕಾರಿ ಜಾಗವನ್ನು  ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ  ಮಂಜೂರು ಗೊಳಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆ ಆಗ್ರಹಿಸಿದರು. ನೆಲ್ಯಾಡಿ-ಪಡ್ಡಡ್ಕ ರಸ್ತೆ ಡಾಮರೀಕ ರಣಗೊಂಡಿದ್ದರೂ ಆರೇ ತಿಂಗಳಲ್ಲಿ ಡಾಮರು ಎದ್ದು ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿದೆ. ಇದನ್ನು ಸರಿಪಡಿಸುವಂತೆ. ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸ್ಥರ ಸಮಸ್ಯೆ ಕುರಿತಂತೆ ಸಂಬಂಧಿಸಿದವರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

Advertisement

ಗ್ರಾ.ಪಂ. ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಅವರು ಮಾತನಾಡಿ, ಮದ್ಯದಂಗಡಿಯಿಂದ ಮಹಿ ಳೆಯರಿಗೆ ತೊಂದರೆಯಾದಲ್ಲಿ  ರಕ್ಷಣೆಗೆ ಜನಜಾಗೃತಿ ವೇದಿಕೆ ಹೋರಾಟಕ್ಕೆ ಸಿದ್ಧವಿದ್ದು  ಹಲವು ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಬಾರ್‌ ವಿರುದ್ಧ ಈಗಾ ಗಲೇ ಪ್ರತಿಭಟನೆಗೆ ದಿನ ನಿಗದಿಯಾಗಿದೆ ಎಂದರು.

ಅಂಗನವಾಡಿ ವಲಯ ಮೇಲ್ವಿಚಾರಕಿ ಉಮಾ ವತಿ ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯರಾದ ಅಬ್ರಹಾಂ ಕೆ.ಪಿ., ಅಬ್ದುಲ್‌ ಹಮೀದ್‌, ಚಿತ್ರಾ ರಾಮನಗರ, ಪೋ›ರಿನಾ ಡಿ’ಸೋಜಾ, ಉಷಾ ಜೋಯಿ, ಉಮಾವತಿ ದರ್ಖಾಸು, ಲೈಲಾ ತೋಮಸ್‌, ತೀಥೆìಶ್ವರ ಯು. ಉಪಸ್ಥಿತರಿದ್ದರು. ಪಿ.ಡಿ.ಒ. ದೇವರಾಜ್‌ ಸ್ವಾಗತಿಸಿ, ನಿರೂಪಿಸಿದರು. ಉಷಾ ಒ.ಕೆ. ವಂದಿಸಿದರು. ಸಿಬಂದಿ ಶಿವಪ್ರಸಾದ್‌, ಗಿರೀಶ್‌, ಸೋಮಶೇಖರ್‌ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next