Advertisement

ಸಿಎಎ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

11:10 AM Jan 13, 2020 | Team Udayavani |

ಬನಹಟ್ಟಿ: ಸಿಎಎ ವಿರುದ್ಧ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಗರ ಬಿಜೆಪಿ ಘಟಕ ಹಾಗೂ ಹಿಂದು ಸಂಘಟನೆಗಳ ಮುಖಂಡರು ಪಿಎಸ್‌ಐ ರವಿಕುಮಾರ ಧರ್ಮಟ್ಟಿ ಅವರಿಗೆ ಮನವಿ ಸಲ್ಲಿಸಿದರು.

Advertisement

ರಬಕವಿ-ಬನಹಟ್ಟಿ, ರಾಮಪುರ, ಹೊಸೂರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕ ಸ್ಥಳಗಳಲ್ಲಿ, ಗೋಡೆಗಳ ಮೇಲೆ, ವಿದ್ಯುತ್‌ ಕಂಬಗಳ ಮೇಲೆ ಹಾಗೂ ಇನ್ನುಳಿದಸ್ಥಳಗಳಲ್ಲಿ ಸಿಎಎ ಕಾಯ್ದೆಯ ವಿರುದ್ಧ ಬಿತ್ತಿ ಪತ್ರಗಳನ್ನು ಅಂಟಿಸಿ ಕಾನೂನಿಗೆ ಅಗೌರವ ತೋರಿಸುವಕೆಲಸ ನಿರಂತರವಾಗಿ ನಡೆಯುತ್ತಿದ್ದು,ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ನಗರ ಬಿಜೆಪಿ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಗಾಯಕವಾಡ, ಬಸವರಾಜ ಮನ್ಷಿ, ವಿಜಯ ಕಲಾಲ, ಈರಣ್ಣ ಚಿಂಖಂಡಿ, ವಿರೂಪಾಕ್ಷಯ್ಯ ಮಠದ, ಶಿವಾನಂದ ಗುಂಡಿ, ಚನ್ನು ಮಾಲಾಪುರ, ಅಶೋಕ ರಾವಳ, ಸದಾಶಿವ ತಟಕೋಟ, ಶಿವಾನಂದ ಕಾಗಿ, ಈಶ್ವರ ಕಾಡದೇವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next