Advertisement

ವಿಚಾರ ಸಂಕಿರಣ ಜ್ಞಾನವೃದ್ಧಿಗೆ ಪೂರಕ

10:18 PM Nov 26, 2019 | mahesh |

ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಯ ವಿಷಯದಲ್ಲಿ ವಿಚಾರ ಸಂಕಿರಣಗಳು ಬಹುದೊಡ್ಡ ಪಾತ್ರ ನಿರ್ವಹಿಸುತ್ತವೆ. ಈ ವಿಷಯವನ್ನು ಮನಗಂಡೇ ಇಂದು ಬಹುತೇಕ ಎಲ್ಲ ಶಿಕ್ಷಣ ಸಂಸ್ಥೆಗಳು ಆಗಾಗ ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿವೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಜ್ಞಾನ ಸಂಪಾದನೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿದ್ದು, ಸದ್ಬಳಕೆ ಅತ್ಯಗತ್ಯ.

Advertisement

ಸಾಧಕರ ಪರಿಚಯ
ವಿಚಾರ ಸಂಕಿರಣ ಹೆಸರೇ ಹೇಳುವಂತೆ ಇದೊಂದು ವಿಷಯಗಳ ವಿನಿಮಯಕ್ಕಾಗಿಯೇ ನಡೆಸುವ ಕಾರ್ಯಕ್ರಮವಾಗಿದ್ದು, ಸಾಮಾನ್ಯವಾಗಿ ಸಾಧಕರೊಂದಿಗೆ ಸಂವಾದ, ವಿಷಯ ವಿನಿಮಯಗಳು ನಡೆಯುತ್ತವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ವಿವಿಧ ಸಾಧಕರ ಪರಿಚಯ ಆಗುವುದಲ್ಲದೆ, ಅವರು ನಡೆದು ಬಂದ ಹಾದಿ, ಪ್ರಸ್ತುತ ಅವರು ಕೆಲಸ ನಿರ್ವಹಿಸುತ್ತಿರುವ ಕ್ಷೇತ್ರದ ಆಗು-ಹೋಗುಗಳ ಬಗ್ಗೆಯೂ ಜ್ಞಾನ ದೊರೆಯುತ್ತದೆ. ಸಂದೇಹಗಳ ನಿವಾರಣೆ ಹೊಸ ವಿಷಯಗಳ ವಿನಿಮಯಕ್ಕೂ ಇದು ಉತ್ತಮ ವೇದಿಕೆಯಾಗಿದೆ.

ಕೌಶಲ ವೃದ್ಧಿ
ವಿಚಾರಸಂಕಿರಣಗಳು ಕೇವಲ ಭಾಷಣದ ವೇದಿಕೆಯಾಗಿರುವುದಿಲ್ಲ. ಅಲ್ಲಿ ಚರ್ಚೆ, ಸಂವಾದ, ಸಂಶೋಧನ ಪ್ರಬಂಧಗಳ ಮಂಡನೆ ನಡೆಯುವುದರಿಂದ ಇದೊಂದು ಬೌದ್ದಿಕ ವೇದಿಕೆಯಾಗಿರುತ್ತದೆ. ಹೀಗಾಗಿ ವಿಚಾರ ಸಂಕಿರಣಗಳಿಗೆ ತನ್ನದೇ ವೈಶಿಷ್ಟéಯಿದೆ. ವಿಚಾರ ಸಂಕಿರಣಗಳಲ್ಲಿ ವಿದ್ಯಾರ್ಥಿಗಳಲ್ಲಿ ಭಾಗವಹಿಸುವುದರಿಂದ ಸಂವಾದದಿಂದ ಸಂವಹನ ಕೌಶಲ ವೃದ್ಧಿ, ಪ್ರಬಂಧ ಮಂಡನೆಯಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ.

ಭವಿಷ್ಯಕ್ಕೆ ಪೂರಕ
ಕಾಲೇಜುಗಳಲ್ಲಿ ಆಯೋಜಿಸಲಾಗುವ ಕಾರ್ಯಾಗಾರ ಮತ್ತು ವಿಚಾರಸಂಕಿರಣದಿಂದಾಗಿ ನಮ್ಮ ಭವಿಷ್ಯದ ಬಗ್ಗೆ ಹಲವಾರು ಮಾಹಿತಿ ತಿಳಿದುಕೊಳ್ಳಬಹುದು. ಉದ್ಯೋಗ ಮತ್ತು ವೃತ್ತಿಪರತೆಯ ಅರಿವು ಇದಿರಿಂದಾಗುತ್ತದೆ. ಅವಕಾಶಗಳು ಸಂಪೂರ್ಣ ಮಾಹಿತಿ ದೊರೆಯುತ್ತದೆ.

ವೃತ್ತಿ ಜೀವನದ ಮಾಹಿತಿ
ಪದವಿ ಅಥವಾ ಪದವಿ ಬಳಿಕ ಮುಂದೇನು ಎಂಬ ಗೊಂದಲದಲ್ಲಿಯೇ ಬಹುತೇಕ ವಿದ್ಯಾರ್ಥಿಗಳಿರುತ್ತಾರೆ. ಇಂತವರಿಗೆ ವಿಚಾರ ಸಂಕಿರಣಗಳು ಸೂಕ್ತ ಮಾರ್ಗದರ್ಶನ ನೀಡುವ ಜತೆಗೆ ವೃತ್ತಿಪರ ಸಂಸ್ಥೆಗಳ ಹುಡುಕಾಟಕ್ಕೂ ಸಹಕಾರಿಯಾಗಲಿದೆ. ಕೌಶಲಗಳ ಅಭಿವೃದ್ಧಿಯ ಜತೆಗೆ ಸಂಶೋಧನೆ ಮಾಡಬಹುದಾದ ಹೊಸ ಹೊಸ ವಿಷಯಗಳನ್ನು ವಿದ್ಯಾರ್ಥಿಗಳ ಗಮನಕ್ಕೆ ತರುವಲ್ಲಿ ವಿಚಾರ ಸಂಕಿರಣಗಳ ಪಾತ್ರ ಬಹಳ ದೊಡ್ಡದಿದ್ದು, ಈಗಾಗಲೇ ಮಾಡಿರುವ ಸಂಶೋಧನೆಗಳ ವಿಷಯ ಮಂಡನೆಗೂ ಅವಕಾಶಗಳು ದೊರೆಯುತ್ತವೆ. ಸಾಮಾನ್ಯವಾಗಿ ಇಲ್ಲಿ ಅತ್ಯುನ್ನತ ಮಟ್ಟದ ಚರ್ಚೆಗಳು ನಡೆಯುವುದರಿಂದ ವಿದ್ಯಾರ್ಥಿಗಳ ಯೋಚನಾ ಮಟ್ಟವೂ ಹೆಚ್ಚುತ್ತದೆ.

Advertisement

ಹೊಸ ವಿದ್ಯಾರ್ಥಿಗಳ ಪರಿಚಯ
ಕೇವಲ ಜ್ಞಾನಾರ್ಜನೆಗೆ ಮಾತ್ರವಲ್ಲದೆ ಹೊಸ ಪರಿಚಯಕ್ಕೂ ವಿಚಾರ ಸಂಕಿರಣಗಳು ಕಾರಣವಾಗುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯುವ ಕಾರಣ ಇತರ ವಿದ್ಯಾರ್ಥಿಗಳ ಪರಿಚಯವಾಗುವ ಜತೆಗೆ ಆಲೋಚನೆಗಳು, ಸಂಶೋಧನೆಗಳ ವಿನಿಮಯವೂ ಸಾಧ್ಯವಾಗುತ್ತದೆ.

- ವೃಂದಾ

Advertisement

Udayavani is now on Telegram. Click here to join our channel and stay updated with the latest news.

Next