Advertisement

ಮೋದಿ-ಶಾ ಜೋಡಿ ಕೃಷ್ಣ-ಅರ್ಜುನರಂತೆ ಎಂದ ಸ್ಟೈಲ್ ಕಿಂಗ್!

10:29 AM Aug 13, 2019 | Hari Prasad |

ಚೆನ್ನೈ: ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ 370ನೇ ವಿಧಿಯನ್ನು ರದ್ದುಗೊಳಿಸುವ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದಿಟ್ಟ ನಿರ್ಧಾರಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಪ್ರಶಂಸೆಯ ನುಡಿಗಳನ್ನಾಡಿದ್ದಾರೆ. ಮತ್ತು ಈ ನಿರ್ಧಾರವನ್ನು ತೆಗೆದುಕೊಂಡಿರುವುದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ರಜನಿಕಾಂತ್ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಇದೇ ಸಂದರ್ಭದಲ್ಲಿ ‘ಮಿಶನ್ ಕಾಶ್ಮೀರ’ ಯಶಸ್ಸಿಗಾಗಿ ತಲೈವಾ ಅವರು ಅಮಿತ್ ಶಾ ಅವರನ್ನೂ ಸಹ ಪ್ರಶಂಸಿದ್ದಾರೆ. ಮೋದಿ ಮತ್ತು ಶಾ ಅವರನ್ನು ಮಹಾಭಾರತದ ಎರಡು ಮಹೋನ್ನತ ಪಾತ್ರಗಳಿಗೆ ಹೋಲಿಸಿದ ರಜನಿಕಾಂತ್ ಅವರು ಇವರಿಬ್ಬರಲ್ಲಿ ಯಾರು ಕೃಷ್ಣ ಹಾಗೂ ಯಾರು ಅರ್ಜುನ ಎಂದು ಮಾತ್ರ ನಮಗೆ ಗೊತ್ತಿಲ್ಲ ; ಅದನ್ನು ಅವರಿಬ್ಬರೇ ಬಲ್ಲರು ಎಂದು ಹೆಳುವುದಕ್ಕೆ ಮರೆಯಲಿಲ್ಲ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಸಂಬಂಧಿಸಿದ ಪುಸ್ತಕ ಒಂದರ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ರಜನಿಕಾಂತ್ ಅವರು ಈ ರೀತಿಯ ಹೋಲಿಕೆಯನ್ನು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next