Advertisement

ಗೈರಾಗಿದ್ದಕ್ಕೆ ಖ್ಯಾತ ಗಣಿತ ಪರಿಣಿತ ಆನಂದ್‌ ಕುಮಾರ್‌ಗೆ ದಂಡ

09:56 AM Nov 28, 2019 | Hari Prasad |

ಗುವಾಹಟಿ: ವಿಚಾರಣೆಗೆ ಹಾಜರಾಗದ ಕಾರಣ ಖ್ಯಾತ ಗಣಿತ ಪರಿಣಿತ, ಸೂಪರ್‌ 30 ಕಾರ್ಯಕ್ರಮದ ಸಂಸ್ಥಾಪಕ ಆನಂದ್‌ ಕುಮಾರ್‌ಗೆ ಗುವಾಹಟಿ ಹೈಕೋರ್ಟ್‌ 50 ಸಾವಿರ ರೂ. ದಂಡ ವಿಧಿಸಿದೆ. ಗುವಾಹಟಿ ಐಐಟಿಯ ನಾಲ್ವರು ವಿದ್ಯಾರ್ಥಿಗಳು ಇವರ ವಿರುದ್ಧ ಟೂಷನ್‌ ಶುಲ್ಕ ವಿಚಾರವಾಗಿ ವಂಚನೆ ದಾವೆ ಹೂಡಿದ್ದರು.

Advertisement

ಅರ್ಜಿಯ ವಿಚಾರಣೆಗೆ ಪದೇ ಪದೆ ಗೈರಾದ ಹಿನ್ನೆಲೆಯುಲ್ಲಿ ನ್ಯಾಯಮೂರ್ತಿಗಳು, ಅನಂದ್‌ಕುಮಾರ್‌ಗೆ 50 ಸಾವಿರ ರೂ. ದಂಡ ವಿಧಿಸಿ, ಮುಂದಿನ ವಿಚಾರಣೆಯನ್ನು ನ.28ಕ್ಕೆ ಮುಂದೂಡಿದ್ದಾರೆ. ಜತೆಗೆ ಈ ದಂಡದ ಮೊತ್ತವನ್ನು ವಿದ್ಯಾರ್ಥಿಗಳಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ. ಐಐಟಿ, ಜೆಇಇ ಪ್ರವೇಶಕ್ಕೆ ಆನಂದ್‌ ಕುಮಾರ್‌ ಸೂಪರ್‌ 30 ಕಾರ್ಯಕ್ರಮದಡಿ ಕೋಚಿಂಗ್‌ ನೀಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next