Advertisement

Mangaluru: ಅಪಹರಿಸಲು ಸುಪಾರಿ; ಇಬ್ಬರ ಬಂಧನ

09:15 PM May 09, 2024 | Team Udayavani |

ಮಂಗಳೂರು: ವಿದೇಶದಲ್ಲಿರುವ ವ್ಯಕ್ತಿಯೊಬ್ಬರು ಕದ್ರಿ ಕಂಬಳ ನಿವಾಸಿಯೊಬ್ಬರನ್ನು ಅಪಹರಿಸಲು ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ  ಕದ್ರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಪಾಣೆಮಂಗಳೂರು ನಿವಾಸಿಗಳಾದ ಪ್ರಜ್ವಲ್‌ ಮತ್ತು ಅಕ್ಷಯ್‌ ಬಂಧಿತ ಆರೋಪಿಗಳು.

ಕದ್ರಿಯ ವ್ಯಕ್ತಿಯೋರ್ವರು ವಿದೇಶದಲ್ಲಿರುವ ವ್ಯಕ್ತಿಯೋರ್ವರಿಂದ 18 ಲ.ರೂ. ಸಾಲ ಪಡೆದುಕೊಂಡಿದ್ದರು. ಅದರಲ್ಲಿ  12.05 ಲ. ರೂ. ಸಾಲ ಮರುಪಾವತಿ ಮಾಡಿದ್ದರು. ಉಳಿದ ಹಣ ನೀಡಲು ಬಾಕಿಯಿತ್ತು. ಇದೇ ವಿಚಾರದಲ್ಲಿ ವಿದೇಶದಲ್ಲಿದ್ದ ವ್ಯಕ್ತಿ ಆರೋಪಿಗಳಿಗೆ ಸಾಲ ಬಾಕಿಯಿದ್ದ ವ್ಯಕ್ತಿಯನ್ನು ಅಪಹರಿಸಲು ಸುಪಾರಿ ನೀಡಿದ್ದಾನೆ. ಅದರಂತೆ ಆರೋಪಿಗಳು ಅಪಹರಣಕ್ಕೆ ಯತ್ನಿಸಿದ್ದರು. ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next