Advertisement

ಬಿಸಿಲ ಝಳ: ಸುಟ್ಟ ಗಾಯ

12:55 AM Mar 30, 2019 | Sriram |

ಕಾಸರಗೋಡು: ಬಿಸಿಲ ಝಳದಿಂದ ಪಯ್ಯನ್ನೂರು ರಾಮಂತಳಿ ಶ್ರೀ ಶಂಕರನಾರಾಯಣ ದೇವಸ್ಥಾನದ ಸಿಬಂದಿ ಎರಮಂ ನಿವಾಸಿ ಕೆ.ವಿ. ರಾಜೇಶ್‌ (35) ಅವರಿಗೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂದರ್ಭ ಅವರು ಅಂಗಿ ಧರಿಸದೆ ಹೊರಗೆ ಹೋಗಿದ್ದರು ಎನ್ನಲಾಗಿದೆ.

Advertisement

ಆರೋಗ್ಯ ಇಲಾಖೆ ಎಚ್ಚರಿಕೆ
ಜಿಲ್ಲೆಯಲ್ಲಿ ಬಿಸಿಲ ಝಳದಿಂದ ಉಷ್ಣತೆ ಗರಿಷ್ಠ ಮಟ್ಟಕ್ಕೇರಿದೆ. ಶುಕ್ರ ವಾರ 34 ಡಿ.ಸೆ. ದಾಖಲಾಗಿದ್ದು, ಈ ವರ್ಷದ ಗರಿಷ್ಠ ಉಷ್ಣತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವಾಹ್ನ 11.30ರಿಂದ ಅಪರಾಹ್ನ 3 ಗಂಟೆಯ ಮಧ್ಯೆ ಬಿಸಿಲಿಗೆ ಮೈಯೊಡ್ಡದಂತೆ ಆರೋಗ್ಯ ಇಲಾಖೆ ಎಚ್ಚರಿಸಿದೆ.

ಕಾರ್ಮಿಕರು ಮಧ್ಯಾಹ್ನ ಬಿರು ಬಿಸಿಲಿನಲ್ಲಿ ಕೆಲಸ ನಿರ್ವ ಹಿ ಸದಂತೆ, ಬೆಳಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ಮಕ್ಕಳನ್ನು ಹೊರಗೆ ಆಡಲು ಬಿಡದಂತೆಯೂ ಸೂಚಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next