Advertisement

ಸುಂಕದಕಟ್ಟೆ: ಕಾರು ಢಿಕ್ಕಿ ಹೊಡೆದು ರಿಕ್ಷಾ ಪಲ್ಟಿ…ಚಾಲಕನಿಗೆ ಗಂಭೀರ ಗಾಯ

04:55 PM Dec 12, 2022 | Team Udayavani |

ಬಜಪೆ : ಅತೀ ವೇಗವಾಗಿ ಬಂದ ಕಾರೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ದ್ವಾರದ ಸಮೀಪ ಬಜಪೆ -ಕೈಕಂಬ ರಾಜ್ಯ ಹೆದ್ದಾರಿ 101ರಲ್ಲಿ ಸೋಮವಾರ ನಡೆದಿದೆ.

Advertisement

ಮಧ್ಯಾಹ್ನ ಬಜಪೆಯಿಂದ ಕೈಕಂಬ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಕೈಕಂಬದ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಚಾಲಕ ಕೊಳಂಬೆ ಬೈಲಿನ ಶಂಕರ ಎಂಬವರಿಗೆ ಗಂಭೀರ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸುಂಕದಕಟ್ಟೆ ದ್ವಾರ ಬಳಿ ಸ್ಪೀಡ್‌ ಬೇಕರ್‌ ಅಳವಡಿಕೆ ಅಗತ್ಯ:
ಸುಂಕದಕಟ್ಟೆ ದ್ವಾರದ ಬಳಿ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿದೆ. ಈ ಹಿಂದೆ ರಸ್ತೆಯಲ್ಲಿ ಕೊಂಚ ಹುಬ್ಬುಗಳು ಇತ್ತು. ಅದರೆ ಅದನ್ನು ಈಗ ಸಮತಟ್ಟು ಮಾಡಲಾಗಿದೆ. ಕಂದಾವರ ಗ್ರಾಮ ಪಂಚಾಯತ್‌ನಿಂದ ಇಲ್ಲಿ ಸ್ಪೀಡ್‌ ಬ್ರೇಕರ್ ಅಳವಡಿಕೆಗೆ ಮನವಿ ಮಾಡಲಾಗಿದ್ದು ಇದಕ್ಕೆ ರಾಜ್ಯ ಹೆದ್ದಾರಿ ಸ್ಪಂದನೆ ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದರ ಸಮೀಪದಲ್ಲೇ ಶಾಲಾ, ಕಾಲೇಜು ಇರುವುದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸ್ಪೀಡ್‌ ಬ್ರೇಕರ್ ಅಳವಡಿಕೆ ಅಗತ್ಯವಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಂಡೀಗಢ : ವ್ಯಕ್ತಿಯನ್ನು ಚಲಿಸುವ ಟ್ರಕ್‌ನ ಬಾನೆಟ್‌ಗೆ ಕಟ್ಟಿ ಶಿಕ್ಷೆ; ವೈರಲ್ ವಿಡಿಯೋ

Advertisement

Udayavani is now on Telegram. Click here to join our channel and stay updated with the latest news.

Next