Advertisement

ಸಂಜ್ವಾನ್‌ ಸೇನಾ ನೆಲೆ ದಾಳಿ ರೂವಾರಿ ವಕಾಸ್‌ ಫಿನಿಶ್‌

06:00 AM Mar 06, 2018 | Team Udayavani |

ಶ್ರೀನಗರ: ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಸಂಜ್ವಾನ್‌ ಸೇನಾ ಶಿಬಿರದ ಮೇಲೆ ನಡೆದ ದಾಳಿಯ ಮಾಸ್ಟರ್‌ ಮೈಂಡ್‌ ಮುಫ್ತಿ ವಕಾಸ್‌ನನ್ನು ಗುಂಡಿಟ್ಟು ಸಾಯಿಸಲಾಗಿದೆ. ಪಾಕಿಸ್ಥಾನದ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಪ್ರಮುಖನಾಗಿರುವ ಈತ ಆವಂತಿಪುರ ಹತ್ವಾರ್‌ ಎಂಬ ಪ್ರದೇಶದ ಮನೆಯಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಸೇನೆಗೆ ಸಿಕ್ಕಿತ್ತು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದ ಕೆಲ ಕಮಾಂಡೋಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ಕೇವಲ 20 ನಿಮಿಷಗಳಲ್ಲಿ ಆತನನ್ನು ಹೊಡೆದುರುಳಿಸಿದ್ದಾರೆ.  ಫೆ.10ರಂದು ಸುಜ್ವಾನ್‌ನಲ್ಲಿರುವ ಸೇನಾ ಕ್ಯಾಂಪ್‌ ಮೇಲೆ ನಡೆದಿದ್ದ ದಾಳಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಸೇರಿದಂತೆ ಆರು ಮಂದಿ ಹುತಾತ್ಮರಾಗಿದ್ದರು. ಲೇತ್‌ಪೋರಾದ ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ನಡೆದಿದ್ದ ದಾಳಿಗೂ ಈತನೇ ಯೋಜನೆ ರೂಪಿಸಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next