Advertisement

ಬೈಕ್ ನಿಂದ ಬಿದ್ದು ಗಾಯಗೊಂಡ ಯುವಕನ ರಕ್ಷಣೆಗೆ ಮುಂದಾದ ಸಚಿವ ಸುನಿಲ್ ಕುಮಾರ್

05:27 PM May 05, 2022 | Team Udayavani |

ಕಾರ್ಕಳ; ಶೃಂಗೇರಿ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಗಾಯಗೊಂಡು ಬಿದ್ದಿದ್ದ ಬಾಳೆ ಹೊನ್ನೂರು ಮೂಲದ ಯುವಕನೋರ್ವನನ್ನು ಅದೇ ಮಾರ್ಗವಾಗಿ ಬರುತ್ತಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ರಕ್ಷಿಸಿ ತನ್ನ ಬೆಂಗಾವಲು ಪಡೆ ವಾಹನದಲ್ಲಿ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯ ತೋರಿದ ಘಟನೆ ಗುರುವಾರ ಸಂಜೆ ನಡೆದಿದೆ..

Advertisement

ಸಚಿವರು ತಮ್ಮ ಕುಟುಂಬ ಸದಸ್ಯರೊಂದಿಗೆ ಶೃಂಗೇರಿ ಕಡೆಯಿಂದ ಕಾರ್ಕಳಕ್ಕೆ ಬರುತಿದ್ದರು. ದಾರಿ ಮಧ್ಯೆ ಕಾರ್ಕಳ ಕಡೆಯಿಂದ ಬೈಕಿನಲ್ಲಿ ತೆರಳುತ್ತಿದ್ದ ಸವಾರನೋರ್ವ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ. ಆತನ ರಕ್ಷಣೆಗೆ ಯಾರು ಹೋಗಿರಲಿಲ್ಲ. ಇದೆ ದಾರಿಯಲ್ಲಿ ಬರುತ್ತಿದ್ದ ಸಚಿವರು ವಾಹನ ನಿಲ್ಲಿಸಿ ಗಾಯಾಳು ಬಳಿ ಹೋಗಿ ವಿಚಾರಿಸಿ, ಧೈರ್ಯ ತುಂಬಿ ತಮ್ಮ ವಾಹನದಲ್ಲಿ ಮನೆ ಮಂದಿ ಇದ್ದ ಕಾರಣ ಬೆಂಗಾಲು ವಾಹನದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ವ್ಯಕ್ತಪಡಿಸಿದ್ದಾರೆ.

ಈ ದೃಶ್ಯವನ್ನು ಸ್ಥಳಿಯರು ಚಿತ್ರಿಕರಿಸಿದ್ದಾರೆ. ಯುವಕ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಚಿವರ ಭದ್ರತಾ ಸಿಬಂದಿ ಪ್ರಭಾಕರ, ಸಚಿವರ ಮನೆಯವರು ಸಹಕರಿಸಿದರು.

ಇದನ್ನೂ ಓದಿ : ಇಟಲಿ ಹಾಗೂ ಕರ್ನಾಟಕದ ಬಾಂಧವ್ಯ ವೃದ್ದಿಗೆ ಸಂಪೂರ್ಣ ಸಹಕಾರ: ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next