Advertisement

ರವಿವಾರದ ರಾಶಿ ಫಲ : ಇಂದು ಈ ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಧನಲಾಭ

07:30 AM Oct 02, 2022 | Team Udayavani |

ಮೇಷ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಸತ್ಕಾರ್ಯಕ್ಕೆ ಧನವ್ಯಯ. ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ದೂರ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಅಧಿಕ ಶ್ರಮ ಎದುರಾದೀತು. ದಂಪತಿಗಳಲ್ಲಿ ಪರಸ್ಪರ ಸಹಕಾರ.

Advertisement

ವೃಷಭ: ಜವಾಬ್ದಾರಿಯುತ ನಡೆಯಿಂದ ಸ್ಥಾನಮಾನಗಳಿಂದ ಗುರುತಿಸುವಿಕೆ. ಕೈ ಹಿಡಿದ ಕೆಲಸ ಕಾರ್ಯಗಳನ್ನು ಪೂರೈಸಿದ ನೆಮ್ಮದಿ. ಸಂಶೋದನಾ ಪ್ರವೃತ್ತಿ. ಪರರೊಂದಿಗೆ ವ್ಯವಹರಿಸುವಾಗ ಪಾರದರ್ಶಕತೆಗೆ ಆದ್ಯತೆ ನೀಡಿ.

ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ದೀರ್ಘ‌ ಪ್ರಯಾಣ. ಪರರ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವಿಕೆ. ಅಧಿಕ ಪರಿಶ್ರಮ. ಹಿರಿಯರೊಂದಿಗೆ ಸಮಾದಾನದಿಂದ ವರ್ತಿಸುವುದರಿಂದ ಮನ್ನಣೆ. ನಿರೀಕ್ಷೆಗೂ ಮೀರಿದ ಧನಲಾಭ.

ಕರ್ಕ: ಆರೋಗ್ಯ ವೃದ್ಧಿ. ನಿರೀಕ್ಷಿಸಿದಂತೆ ಸುಖ. ಸಂದರ್ಭಕ್ಕೆ ಸರಿಯಾಗಿ ಪರಾಕ್ರಮ ಪ್ರದರ್ಶನ. ಚಂಚಲತೆ ಅತೀ ಬುದ್ಧಿವಂತಿಕೆ ತೋರ³ಡುವಿಕೆ. ಜನಪದದಿಂದ ಗೌರವ ಆದರ ಲಭ್ಯ. ಧಾರ್ಮಿಕ ಕಾರ್ಯಗಳಲ್ಲಿ ಏಕಾಗ್ರತೆಗೆ ಆದ್ಯತೆ ನೀಡಿದರೆ ಉಲ್ಲಾಸ.

ಸಿಂಹ: ಸ್ಥಿರ ಬುದ್ಧಿ ಸ್ಪಷ್ಟತೆಗಳಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯದಲ್ಲಿ ಸುದಾರಣೆ. ಆರ್ಥಿಕ ವಿಚಾರದಲ್ಲಿ ನಿರೀಕ್ಷಿಸಿದಷ್ಟು ಸಿಗಲಾರದು. ಧಾರ್ಮಿಕ ಕಾರ್ಯಗಳಲ್ಲಿ ಪರಿಶ್ರಮ ,ಅಡಚಣೆ ತೋರೀತು. ಸಾಂಸಾರಿಕ ಸುಖಕ್ಕೆ ಹೆಚ್ಚಿದ ಶ್ರಮ.

Advertisement

ಕನ್ಯಾ: ಆರೋಗ್ಯ ಗಮನಿಸಿ. ಸ್ವತ್ಛತೆಗೆ ಆದ್ಯತೆ ನೀಡಿ. ಅನಗತ್ಯ ಗೊಂದಲಗಳಿಗೆ ಒಳಗಾಗದಂತೆ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ. ಸಾಂಸಾರಿಕ ಸುಖ ತೃಪ್ತಿದಾಯಕ. ಮಕ್ಕಳಿಂದ ಸಂತೋಷ ವೃದ್ಧಿ.

ತುಲಾ: ಸಣ್ಣ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಪರಾಕ್ರಮ ದೈರ್ಯ ಶೌರ್ಯ ಪ್ರದರ್ಶನ. ಸಂಪತ್ತು ವೃದ್ಧಿ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನ. ಜನಮನ್ನಣೆ. ಗೌರವ ಸುಖಾದಿ ಲಭ್ಯ. ದೂರದ ಮಿತ್ರರಿಂದ ಸಹಕಾರ ಲಭಿಸೀತು.

ವೃಶ್ಚಿಕ: ಮಕ್ಕಳಿಂದ ಸಂತೋಷ ವೃದ್ಧಿ. ವಿದ್ಯೆ ಜ್ಞಾನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಲಭ್ಯ. ಮೇಲಧಿಕಾರಿಗಳಿಂದ ಪ್ರೋತ್ಸಾಹ. ದಾನಧರ್ಮ ಮಾಡಿದ ತೃಪ್ತಿ ಇತ್ಯಾದಿ ಶುಭ ಫ‌ಲ.

ಧನು: ನಿರೀಕ್ಷಿತ ಧನ ಸಂಚಯನ ವೃದ್ಧಿ. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುದಾರಣೆ. ಪಾಲುಗಾರಿಕಾ ವ್ಯವಹಾರಗಳಲ್ಲಿ ಅನಗತ್ಯ ಚರ್ಚೆಗೆ ಅವಕಾಶ ಸಲ್ಲಿಸದಿರಿ. ಅಧ್ಯಯನಕ್ಕೆ ಆದ್ಯತೆ. ನೂತನ ಮಿತ್ರರ ಭೇಟಿಯಿಂದ ಸಂತೋಷ.

ಮಕರ: ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರಿಗೆ ಸಂಭ್ರಮದ ವಾತಾವರಣ. ದೂರದ ಮಿತ್ರರೊಂದಿಗೆ ಸಮಾಲೋಚನೆ. ದಂಪತಿಗಳಲ್ಲಿ ಪರಸ್ಪರ ಸಹಕಾರ. ಉತ್ತಮ ಧನ ಸಂಪಾದನೆ.

ಕುಂಭ: ಆರೋಗ್ಯ ಗಮನಿಸಿ. ದೈಹಿಕ ಶ್ರಮ. ಅಧಿಕ ಬುದ್ಧಿವಂತಿಕೆ ಚುರುಕುತನದ ಪ್ರದರ್ಶನ. ಜನಾನುರಾಗಿ ವರ್ತನೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಪರಿಶ್ರಮಕ್ಕೆ ತಕ್ಕ ಉತ್ತಮ ಪ್ರತಿಫ‌ಲ ಕೆಲಸ ಕಾರ್ಯಗಳಲ್ಲಿ ಸ್ಪಷ್ಟತೆ.

ಮೀನ: ನಿರೀಕ್ಷಿತ ಸ್ಥಾನ ಗೌರವ ದೊರಕಿದ ಸಂತೋಷ.ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಮಕ್ಕಳಿಂದ ಸಂತೋಷ ವೃದ್ಧಿ. ಉತ್ತಮ ಗುಣ ನಡತೆಯಿಂದ ಜನಾದಾರ ಗೌರವ ಪ್ರಾಪ್ತಿ. ಆರೋಗ್ಯದ ಬಗ್ಗೆ ಗಮನಿಸಿ. ಹಿರಿಯರ ಆಶೀರ್ವಾದದಿಂದ ಶ್ರೇಯಸ್ಸು.

Advertisement

Udayavani is now on Telegram. Click here to join our channel and stay updated with the latest news.

Next