Advertisement

ಸುನಾದ ಸುವರ್ಣ ಸೌರಭ 

07:22 PM Apr 20, 2018 | Team Udayavani |

ಉಡುಪಿಯ ಸಂಗೀತ ವಿದ್ವಾಂಸ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಶಿಷ್ಯರಾಗಿರುವ ಮೃದಂಗ ವಿದ್ವಾನ್‌ ಎಸ್‌. ಆರ್‌. ಗಣೇಶಮೂರ್ತಿ ಅವರು ತನ್ನ ಕಲಾಯಾತ್ರೆಯ ಸುವರ್ಣ ಸಂಭ್ರಮದಂಗವಾಗಿ ಕೊಪ್ಪದ ಸೂರಳಿಯಲ್ಲಿ ಇತ್ತೀಚೆಗೆ ಗುರುವಂದನೆಯೊಂದಿಗೆ ವಿಶಿಷ್ಟ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೆರವೇರಿಸಿದರು. 

Advertisement

ಬಾಲಸುಬ್ರಹ್ಯಣ್ಯಂ ಮತ್ತು ವೃಂದದವರು ಗಣಪತಿ ಸ್ತುತಿಯೊಂದಿಗೆ ಪಂಚರತ್ನ ಕೃತಿಗೋಷ್ಠಿ ಗಾಯನ ನಡೆಯಿತು. ಬಳಿಕ ಧೀಮಂತ್‌ ಮತ್ತು ಚಿರಂತನ ಅವರಿಂದ “ಮೃದಂಗ ತರಂಗ’ ನೆರವೇರಿತು. ಅನಂತರ ಬಾಲಸುಬ್ರಹ್ಮಣ್ಯಂ ಶಿಷ್ಯರು ದಿನಪೂರ್ತಿ ಕರ್ನಾಟಕ ಶಾಸ್ತ್ರೀಯ ಕಛೇರಿ ನೀಡಿದರು. ವಯೋಲಿನ್‌ನಲ್ಲಿ ಎಂ.ಇ.ನಟರಾಜ್‌, ವೈಭವ ರಮಣಿ, ಮೋಹನ ಚಿಪಳೂಣಕರ್‌, ಕು| ವೀಣಾ, ಮೃದಂಗದಲ್ಲಿ ಗಣೇಶ್‌ಮೂರ್ತಿ, ನೈಭಿ ಪ್ರಭಾಕರ್‌, ಎನ್‌. ಜಿ. ರಮಾಕಾಂತ, ಕೆ.ಅಭಿಜಿತ್‌ ಮತ್ತು ವೆಂಕಟೇಶ ಡೋಂಗ್ರೆ ಸಹಕರಿಸಿದರು.ಬಾಲಸುಬ್ರಹ್ಮಣ್ಯಂ ದಂಪತಿಗೆ ಗುರುಪೂಜೆ ನೆರವೇರಿಸಲಾಯಿತು. 

ವೆಂಕಟೇಶ 

Advertisement

Udayavani is now on Telegram. Click here to join our channel and stay updated with the latest news.

Next