Advertisement

Politics: ತೇಜಸ್ವಿ ಯಾದವ್‌ಗೆ ಸಮನ್ಸ್‌ ಜಾರಿ

10:37 PM Sep 22, 2023 | Team Udayavani |

ಗಾಂಧಿನಗರ: ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ಅಹ್ಮದಾಬಾದ್‌ನ ಮೆಟ್ರೋಪಾಲಿಟಿನ್‌ ನ್ಯಾಯಾಲಯವು ಶುಕ್ರವಾರ ಸಮನ್ಸ್‌ ಜಾರಿಗೊಳಿಸಿದೆ.

Advertisement

ಪ್ರಕರಣ ಸಂಬಂಧಿಸಿದಂತೆ ಮೊದಲು ಸಮನ್ಸ್‌ ನೀಡಲು ಸಾಧ್ಯವಾಗಿಲ್ಲವೆಂದು ತಿಳಿದ ಬಳಿಕ ಇದು ಎರಡನೇ ಬಾರಿಗೆ ಸಮನ್ಸ್‌ ಜಾರಿಗೊಳಿಸಲಾಗಿದೆ ಆ ಪ್ರಕಾರ, ಅ.13ಕ್ಕೂ ಮುಂಚೆ ಯಾದವ್‌ ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಬರೀ ಗುಜರಾತಿಗಳು ಮಾತ್ರವೇ ವಂಚಕರಾಗಬಹುದು ಎಂದು ಯಾದವ್‌ ನೀಡಿದ್ದ ಹೇಳಿಕೆಯನ್ನು ಆಕ್ಷೇಪಿಸಿ ಐಪಿಸಿ ಸೆಕ್ಷನ್‌ 499 ಹಾಗೂ 500 ಅನ್ವಯ ಕೇಸು ದಾಖಲಿಸಲಾಗಿತ್ತು. ಈ ಸಂಬಂಧ ಆಗಸ್ಟ್‌ 28ರಂದೇ ಕೋರ್ಟ್‌ ಮೊದಲ ಸಮನ್ಸ್‌ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next