Advertisement

ಸುಮಲತಾ ಮೊದಲ ಮತವೇ ಅಸಿಂಧು

02:55 AM May 11, 2019 | Sriram |

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬಂದಿದ್ದ ಮೊದಲ ಮತವೇ ‘ಖೋತಾ’ ಆಗಲಿದೆ. ಎಲೆಕ್ಟ್ರಾನಿಕ್‌ ಪೋಸ್ಟಲ್ ಬ್ಯಾಲೆಟ್ ಮೂಲಕ ಯೋಧನೊಬ್ಬ ಹಾಕಿರುವ ಮತವನ್ನು ಎಣಿಕೆಗೆ ಪರಿಗಣಿಸದಂತೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

Advertisement

ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರ ಆರ್‌.ನಾಯಕ್‌ ಎಲೆಕ್ಟ್ರಾನಿಕ್‌ ಬ್ಯಾಲೆಟ್ ಮೂಲಕ ಓಟ್ ಹಾಕಿ, ‘ತಾವು ಸುಮಲತಾ ಮೇಡಂ ಗೆ ಓಟ್ ಹಾಕಿದ್ದೇನೆ. ಎಲ್ಲರೂ ಅವರಿಗೆ ಓಟ್ ಮಾಡಿ, ಅವರು ದೊಡ್ಡ ಅಂತರದಿಂದ ಗೆದ್ದು ಬರಲಿ’ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಬರೆದುಕೊಂಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ಈ ವಿಚಾರದಲ್ಲಿ ಏನು ಮಾಡಬಹುದು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕೇಳಿಕೊಂಡಿದ್ದರು. ಇದಕ್ಕೆ ಉತ್ತರಿಸಿರುವ ಕೇಂದ್ರ ಆಯೋಗ, ‘ಮತದಾನದ ಗೌಪ್ಯತೆ, ಪಾವಿತ್ರ್ಯತೆ’ಯನ್ನು ಎತ್ತಿ ಹಿಡಿಯಬೇಕಾದ ಕಾರಣ ಈ ಮತವನ್ನು ಎಣಿಕೆಗೆ ಪರಿಗಣಿಸಬೇಡಿ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next