Advertisement
ಬೆಳ್ಳಂ ಬೆಳಗ್ಗೆ 6ಕ್ಕೆ ನಗ ರದ ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ದೇವ ಸ್ಥಾ ನದಲ್ಲಿ ವೈರಮುಡಿ-ರಾಜಮುಡಿ ಕಿರೀಟ ಹಾಗೂ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾ ರಕ್ಕೆ ಚಾಲನೆ ನೀಡಿದರು. ಬಳಿಕ, ಶಂಕರ ಮಠದ ಶ್ರೀ ಆದಿ ಚುಂಚನಗಿರಿ ಮಠ, ಶ್ರೀ ಶನೇಶ್ವರ ದೇವ ಸ್ಥಾನ ದಲ್ಲಿ ಪೂಜೆ ಸಲ್ಲಿಸಿ, ನಂತರ ಕಾಂಗ್ರೆಸ್ನ ವಿವಿಧ ಮುಖಂಡರ ಮನೆಗಳಿಗೆ ಭೇಟಿ ನೀಡಿದರು. ಶಂಕರ ಮಠದಲ್ಲಿರುವ ನಗರಸಭೆ ಸದಸ್ಯ ನಹೀಂ, ಬ್ರಾಹ್ಮಣ ಸಭಾ ಅಧ್ಯಕ್ಷ ಬೆಳ್ಳೂರು ಶಿವರಾಂ, ಸೇವಾ ಕಿರಣ ವೃದ್ಧಾ ಶ್ರಮ, ಸೊಸೈಟಿ ಚಂದ್ರು ಸೇರಿ ದಂತೆ ಹಲ ವಾರು ಕಾಂಗ್ರೆಸ್ ಮುಖಂಡರು, ಅಂಬರೀಶ್ ಅಭಿಮಾನಿಗಳ ಮನೆಗಳಿಗೆ ಭೇಟಿ ನೀಡಿ, ಬೆಂಬಲ ಕೋರಿದರು.
Related Articles
Advertisement
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸುಮಲತಾ ಅವರು ಮುಂದೆ ಸೂಕ್ತ ನಿರ್ಧಾರಕೈಗೊಳ್ಳುವ ವಿಶ್ವಾಸವಿದೆ.ಅಂಬರೀಶ್ ಜತೆ ಮೂರು ದಶಕದ ಬಾಂಧವ್ಯ ಇದೆ. ಅವರ ಹಿತೈಷಿಯಾಗಿ ಸುಮಲತಾ ಅವರ ಸ್ಪರ್ಧೆಯನ್ನು ನಾನು ಬೆಂಬಲಿಸುತ್ತೇನೆ. ಅಂಬರೀಶ್ಗೆ ಮಂಡ್ಯದಲ್ಲಿ ದೊಡ್ಡ ಅಭಿಮಾನಿ ಬಳಗವೇಇದೆ. ಅದೇ ಅವರ ಗೆಲುವಿಗೆ ಸಹಕಾರಿಯಾಗಲಿದೆ.
● ಜಗ್ಗೇಶ್, ನಟ , ಬಿಜೆಪಿ ಮುಖಂಡ