Advertisement

ನಿಮ್ಮೊಂದಿಗೆ ನಾವಿದ್ದೇವೆ: ಸಂಸದೆ

05:59 PM May 11, 2020 | mahesh |

ಕೆ.ಆರ್‌.ಪೇಟೆ: ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೋವಿಡ್ ವೈರಾಣು ಹರಡು ವುದಿಲ್ಲ, ನಿಮ್ಮೊಂದಿಗೆ ನಾವಿದ್ದೇವೆ, ಹೆದರಬೇಡಿ ಎಂದು ಸಂಸದೆ ಸುಮಲತಾ ಧೈರ್ಯ ತುಂಬಿದರು. ಜಾಗಿನಕೆರೆ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಕೋವಿಡ್ ಜಾಗೃತಿ ಮೂಡಿಸುವ ಜೊತೆಗೆ ಜನರಿಗೆ ಧೈರ್ಯಹೇಳಿ ಮನ್‌ಮುಲ್‌ನಿಂದ ನೀಡುತ್ತಿರುವ ಆಹಾರ ಧಾನ್ಯಗಳ ಕಿಟ್‌ ವಿತರಿಸಿ
ಮಾತನಾಡಿದರು.

Advertisement

ಅಂತರ ಕಾಯ್ದುಕೊಳ್ಳಿ: ನಿಮ್ಮ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ವೈರಾಣು ಕಾಣಿಸಿಕೊಂಡಿರುವುದರಿಂದ ನಿಮಗೆ ಗಾಬರಿಯಾಗುವುದು ಸಹಜ. ಆದರೆ ಅಂತರ ಕಾಯ್ದುಕೊಂಡರೆ ಕೋವಿಡ್ ನಮ್ಮ ಹತ್ತಿರ ಸುಳಿಯುವುದಿಲ್ಲ. ಈಗಾಗಲೇ ಸೊಂಕಿತರ ಸಂಕರ್ಪದಲ್ಲಿದ್ದವರು ಹಾಗೂ ಅವರ ಕುಟುಂಬದವರೊಂದಿಗೆ ಕೋವಿಡ್ ಸೋಂಕು ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರು ಆತಂಕ ಪಡದೆ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸೂಚನೆ ಪಾಲಿಸಿ, ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಮನವಿ
ಮಾಡಿದರು. ಮನ್‌ಮುಲ್‌ ನಿರ್ದೇಶಕ ಡಾಲು ರವಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next