Advertisement

Sumalatha ಸುದ್ದಿಗೆ ಹೋಗಿಲ್ಲ;ಮುಂದೆಯೂ ಹೋಗಲಾರೆ: ಡಿಕೆಶಿ

11:55 PM Apr 01, 2024 | Team Udayavani |

ಬೆಂಗಳೂರು: ಕುಂಬಳಕಾಯಿ ಕಳ್ಳ ಅಂದರೆ ಸಂಸದೆ ಸುಮಲತಾ ಯಾಕೆ ಹೆಗಲು ಮುಟ್ಟಿಕೊಂಡು ನೋಡಬೇಕು?
-ಅಂಬರೀಷ್‌ ಕಾಂಗ್ರೆಸ್‌ಗೆ ಏನು ಅನ್ಯಾಯ ಮಾಡಿದರು ಎಂದು ಕೇಳಿದ ಸುಮಲತಾಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೇಳಿದ ಮರುಪ್ರಶ್ನೆ ಇದು.

Advertisement

ನಾನು ಸುಮಲತಾ ಸುದ್ದಿಗೆ ಹೋಗಿಲ್ಲ; ಮುಂದೆ ಹೋಗುವುದೂ ಇಲ್ಲ. ಅವರ ಸುದ್ದಿ ನನಗೆ ಅಗತ್ಯ ಇಲ್ಲ. ನಾನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ “ವಿಷ’ದ ಹೇಳಿಕೆ ನೀಡಿದ್ದೇನೆ. ಅದಕ್ಕೆ ಸುಮಲತಾ ಯಾಕೆ ಪ್ರತಿಕ್ರಿಯಿಸಬೇಕು ಎಂದು ಖಾರವಾಗಿ ಕೇಳಿದರು.

ಸದಾಶಿವ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಷ್‌ ಅವರಿಗೆ ಕಾಂಗ್ರೆಸ್‌ ಏನು ಮಾಡಿದೆ ಅನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊನೆಯುಸಿರು ಬಿಡುವ ವೇಳೆಯಲ್ಲಿ ಏನು ಹೇಳಿದರು ಎಂಬುದೂ ಗೊತ್ತಿದೆ. ನಾವು ಈಗ ಆ ವಿಚಾರಗಳನ್ನು ಮಾತನಾಡುವುದಿಲ್ಲ ಎಂದರು.

ದೇಣಿಗೆ ಸಂಗ್ರಹಕ್ಕೆ ರಾಹುಲ್‌ ಗಾಂಧಿ ಕರೆ ನೀಡಿರುವ ಬಗ್ಗೆ ಕೇಳಿದಾಗ, ಚುನಾವಣೆ ನಡೆಸಬೇಕು. ನಿಮಗೆ (ಮಾಧ್ಯಮಗಳಿಗೆ) ಜಾಹೀರಾತು ನೀಡಬೇಕು. ದೇಣಿಗೆ ಸಂಗ್ರಹ ಮಾಡಲೇಬೇಕು ವಿಧಿ ಇಲ್ಲವಲ್ಲ ಎಂದು ಹೇಳಿದರು. ನಿಮಗೂ ಐಟಿ ನೋಟಿಸ್‌ ಬಂದಿದೆ ಎಂದಾಗ, ಇದಕ್ಕೆ ಅನಂತರ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next