Advertisement

ಸುಳ್ಯ: ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿ ನೆರವು

11:47 PM Mar 18, 2021 | Team Udayavani |

ಸುಳ್ಯ: ಆಲೆಟ್ಟಿಯ ಬಡ್ಡಡ್ಕದ ಅಂಗವಿಕಲರೊಬ್ಬರಿಗೆ ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್‌ ಅವರು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ.

Advertisement

ಅಂಗವಿಕಲತೆಯಿಂದ ಬಳಳುತ್ತಿದ್ದ ರವಿ ಮೊಗೆರಾ ಅವರು ತಮ್ಮ ಮನೆಗೆ ಹೋಗಲು ಮೆಟ್ಟಿಲು ಗಳನ್ನು ಅವಲಂಬಿಸಿದ್ದರು. ಸರಕಾರದಿಂದ ಮೋಟಾರು ಸೈಕಲ್‌ ಸಿಕ್ಕಿದ್ದರೂ ಅದನ್ನು ರಸ್ತೆಯ ಬದಿ ನಿಲ್ಲಿಸಬೇಕಿತ್ತು. ಕೂಲಿ ಕೆಲಸ ಮಾಡುವ ಇವರು ರಸ್ತೆಗೆ ಬರಬೇಕಾದರೆ ಮನೆಯವರೇ ಎತ್ತಿಕೊಂಡು ಬರಬೇಕಾದ ಪರಿಸ್ಥಿತಿ ಇತ್ತು. ಈ ಕುರಿತು ತೇಜ್‌ ಕುಮಾರ್‌ ಬಡ್ಡಡ್ಕ ಅವರು ನಂದಕುಮಾರ್‌ ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ನಂದ ಕುಮಾರ್‌ ಅವರು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ರವಿ ಅವರ ಮನೆಯ ಆಸುಪಾಸಿನಲ್ಲೂ ಕೆಲವು ಮನೆಗಳಿದ್ದು ರಸ್ತೆಯಿಂದ ಅವರಿಗೂ ಉಪಯೋಗವಾಗಲಿದೆ ಎಂದು ನಂದಕುಮಾರ್‌ ಅವರು ಸಂತಸ ಹಂಚಿಕೊಂಡಿದ್ದಾರೆ.

ಈ ಸಂದರ್ಭ ಆಲೆಟ್ಟಿ ಗ್ರಾ.ಪಂ. ಸದಸ್ಯ ಸತ್ಯಕುಮಾರ್‌ ಅಡಿಂಜ, ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್‌ ರಾಜ್‌ ಶೆಟ್ಟಿ , ಪ್ರಮುಖರಾದ ಗೋಕುಲ ದಾಸ್‌, ಶಂಸುದ್ದೀನ್‌, ತೇಜಕುಮಾರ್‌ ಬಡ್ಡಡ್ಕ ಮೊದಲಾದವರಿದ್ದರು.

ಸ್ವಾವಲಂಬಿಯಾಗಿ ಬದುಕಲು ಸಹಕಾರಿ
ಈ ಮೊದಲು ರಸ್ತೆ ಇಲ್ಲದ್ದರಿಂದ ಕೆಲಸಕ್ಕೆ ಹೋಗಲು ಇನ್ನೊಬ್ಬರನ್ನು ಅವಲಂಬಿಸಿಕೊಂಡಿದ್ದೆ. ರಸ್ತೆ ನಿರ್ಮಾಣ ಮಾಡಿದ್ದರಿಂದ ಸ್ವಾವಲಂಬಿಯಾಗಿ ಬದುಕುವ ಅವಕಾಶವಾಗಿ ದೆ. ಸರಕಾರದಿಂದ ಸಿಕ್ಕಿದ ವಾಹನವೂ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ.
-ರವಿ ಮೊಗೇರ, ರಸ್ತೆ ಫಲಾನುಭವಿ

Advertisement

Udayavani is now on Telegram. Click here to join our channel and stay updated with the latest news.

Next