Advertisement

ಪಶು ಮೇಳದಲ್ಲಿ ಗಮನ ಸೆಳೆದ ಸುಲ್ತಾನ್‌

10:59 AM Jan 07, 2019 | Team Udayavani |

ರಾಯಚೂರು: ಸಿಂಧನೂರಿನ ಪಶು ಮೇಳದಲ್ಲಿ ಎಲ್ಲರ ಕಣ್ಮನ ಸೆಳೆದಿದ್ದು, ಉಡುಪಿ ಜಿಲ್ಲೆಯ ಬ್ರಹ್ಮವರಂನ ಸುಲ್ತಾನ್‌..! ಹೌದು ಓಂಗೋಲ್‌ ತಳಿಯ ಈ ಎತ್ತಿನ ಕಟ್ಟುಮಸ್ತಾದ ಮೈಕಟ್ಟು, ಎತ್ತರ ಎಂಥವರನ್ನಾದರೂ ಆಕರ್ಷಿಸದೆ ಬಿಡದು.

Advertisement

ಇರ್ಷಾದ್‌ ಎನ್ನುವವರ ಈ ಎತ್ತು ಮೇಳದ ಹೈಲೇಟ್‌ ಎಂದೇ ಹೇಳಬೇಕು. ಅಲ್ಲದೇ, ಮೊದಲ ದಿನ ಇರ್ಷಾದ್‌ರನ್ನು ಸಿಎಂ ಕೂಡ ಸನ್ಮಾನಿಸಿ ಗೌರವಿಸಿದರು. ಆದರೆ, ಈ ಎತ್ತನ್ನು ಅವರು ಕೇವಲ ಪ್ರದರ್ಶನಕ್ಕೆ ಸಾಕಿದ್ದಾರೆ. ಸುಮಾರು 10 ಲಕ್ಷಕ್ಕಿಂತ ಅಧಿಕ ಮೌಲ್ಯದ ಎತ್ತು ಎಂದೇ ಹೇಳಲಾಗುತ್ತಿತ್ತು.

ಹಸಿ ಸೊಪ್ಪು, ದವಸ ಧಾನ್ಯಗಳ ಜತೆಗೆ ಕೋಳಿ ಮೊಟ್ಟೆಗಳನ್ನು ಕೂಡ ಎತ್ತಿಗೆ ತಿನ್ನಿಸಲಾಗುತ್ತದೆ. ಈವರೆಗೆ ಸುಮಾರು 8-10 ಮೇಳಗಳಿಗೆ ಪ್ರದರ್ಶನಕ್ಕೆ ಕರೆದುಕೊಂಡು ಹೋಗಲಾಗಿದೆ. ಸಾಕಷ್ಟು ಕಡೆ ಬರುವಂತೆ ತಮಗೆ ಆಹ್ವಾನ ಬರುತ್ತಿವೆ ಎನ್ನುತ್ತಾರೆ
ಮಾಲೀಕ ಇರ್ಷಾದ್‌. 

Advertisement

Udayavani is now on Telegram. Click here to join our channel and stay updated with the latest news.

Next