Advertisement

Sullia ಕಾಲು ಜಾರಿ ಕೆರೆಗೆ ಬಿದ್ದು ವೃದ್ಧೆ ಸಾವು

11:58 PM Jul 15, 2024 | |

ಸುಳ್ಯ: ತೋಟದ ಕೆರೆಗೆ ಕಾಲು ಜಾರಿ ಬಿದ್ದು ವೃದ್ಧೆ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಸೋಮ ವಾರ ಬೆಳಗ್ಗೆ ಸಂಭವಿಸಿದೆ. ಸೋಣಂಗೇರಿ ದಿ| ಮಂಜಪ್ಪ ಶೆಟ್ಟಿ ಅವರ ಪತ್ನಿ ಮೋನಕ್ಕ (82) ಮೃತಪಟ್ಟವರು.

Advertisement

ಅಜ್ಜಾವರ: ಕುಸಿದು ಬಿದ್ದು ಸಾವು
ಅರಂತೋಡು:ಅಜ್ಜಾವರ ಗ್ರಾಮದ ಕರಿಯ ಮೂಲೆಯಲ್ಲಿ ನಡೆದ ವಾಹನ ಅಪಘಾತವೊಂದರ ಬಗ್ಗೆ ಸ್ಥಳ ಮಹಜರು ನಡೆಯುವ ಸಂದರ್ಭದಲ್ಲಿ ಸಾಕ್ಷಿ ಹೇಳಲು ಬಂದಿದ್ದ ಐವರ್ನಾಡಿನ ವೆಂಕಟ್ರಮಣ ಎಂಬವರು ಕುಸಿದುಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ಕರಿಯಮೂಲೆಯಲ್ಲಿ ಶನಿವಾರ ಪಿಕಪ್‌ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿ ಅವರು ಸಾಕ್ಷ್ಯ ನುಡಿಯಲು ಆಗಮಿಸಿದ್ದರು ಎಂದುತಿಳಿದು ಬಂದಿದೆ.ಸುಳ್ಯ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಬಸ್‌ ನಿಲ್ದಾಣದಲ್ಲಿ ಶವ ಪತ್ತೆ
ಪುತ್ತೂರು: ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ಗಣೇಶ (38) ಅವರ ಮೃತದೇಹವು ಇಲ್ಲಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾಗಿದೆ. ನಿಲ್ದಾಣದ ಮೇಲಿನ ಮಹಡಿಗೆ ತೆರಳುವ ಮೆಟ್ಟಿಲುಗಳ ಕೆಳಗೆ ವ್ಯಕ್ತಿಯೊಬ್ಬರು ಶವ ಪತ್ತೆಯಾಗಿದ್ದು, ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next