Advertisement
ಅಕ್ಟೋಬರ್ನಲ್ಲಿ ನಡೆಯಲಿರುವ ಶಾರದೋತ್ಸವದ ಸಂದರ್ಭ ಒಂದು ದಿನ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಿಧ ಇಲಾಖೆಗಳ ಸಹಯೋಗ ಪಡೆದು ಕಾರ್ಯಕ್ರಮ ಹಮ್ಮಿಕೊಳ್ಳುವುದು. ಅ. 16 ರಂದು ಸಮ್ಮೇಳನ ಆಯೋಜನೆ, ಮುಂದಿನ ಸಭೆಗಳಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮಾಡುವ ಕುರಿತಂತೆ ನಿರ್ಧರಿಸಲು ತೀರ್ಮಾನ ಕೈಗೊಳ್ಳಲಾಯಿತು.
ವಿಶ್ವನಾಥ, ಗೋಕುಲ್ದಾಸ್, ಬಾಪು ಸಾಹೇಬ್ ಮೊದಲಾದವರು ಸಲಹೆ ನೀಡಿದರು. ದಯಾನಂದ ಆಳ್ವ ಜಟ್ಟಿಪಳ್ಳ, ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ರಾಜು ಪಂಡಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಎಂ.ಕೆ. ಸತೀಶ್, ರಾಧಾಕೃಷ್ಣ ರೈ ಬೂಡು, ಚಿದಾನಂದ ಹಳೆಗೇಟು, ಜಯರಾಮ ಶೆಟ್ಟಿ, ಕುಸುಮಾಧರ, ರಘುನಾಥ ಜಟ್ಟಿಪಳ್ಳ, ಚಂದ್ರಾಕ್ಷಿ ಜೆ. ರೈ, ಭಾಗೀಶ್ ಕೆ.ಟಿ., ಭವಾನಿಶಂಕರ ಕಲ್ಮಡ್ಕ, ಶಿವಪ್ರಸಾದ್ ಕೇರ್ಪಳ, ರಮೇಶ್ ನೀರಬಿದಿರೆ ಉಪಸ್ಥಿತರಿದ್ದರು.