Advertisement

ನಿರ್ಭೀತಿಯಿಂದ ಮತ ಚಲಾಯಿಸಿ: ಸತೀಶ್‌ ಕುಮಾರ್‌

06:24 AM Mar 14, 2019 | |

ಸುಳ್ಯ: ಲೋಕಸಭೆ ಚುನಾವಣೆ ಸಂದರ್ಭ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸುವ ಸಲುವಾಗಿ ಪೊಲೀಸ್‌ ಇಲಾಖೆ ರಕ್ಷಣೆ ನೀಡಲಿದೆ ಎಂದು ವೃತ್ತ ನಿರೀಕ್ಷಕ ಆರ್‌. ಸತೀಶ್‌ ಕುಮಾರ್‌ ಹೇಳಿದರು.

Advertisement

ಎ. 18ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಗರಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೃತ್ತ ನಿರೀಕ್ಷಕರ ಕಚೇರಿ, ಸುಳ್ಯ ಪೊಲೀಸ್‌ ಠಾಣೆ ವತಿಯಿಂದ ಬುಧವಾರ ಸುಳ್ಯ ಸಿ.ಎ. ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಮತದಾರರನ್ನು ಹೆದರಿಸುವ, ಆಮಿಷ ಒಡ್ಡುವ ಪ್ರಕರಣ ಕಂಡುಬಂದಲ್ಲಿ ತತ್‌ ಕ್ಷಣ ಪೊಲೀಸರ ಗಮನಕ್ಕೆ ತರಬೇಕು. ಮತದಾರರಿಗೆ ರಕ್ಷಣೆ ಒದಗಿಸಿ ಮತ ಚಲಾಯಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ
ತಾಲೂಕಿನ ಐದು ಕಡೆಗಳಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ. ಅಲ್ಲಿ ವಾಹನ ಓಡಾಟದ ಮೇಲೆ ನಿಗಾ ಇಡಲಾಗಿದೆ. ವಾಹನಗಳ ತಪಾಸಣೆ ಮಾಡಲಾಗುವುದು. ಹೆಚ್ಚುವರಿ ಸಿಬಂದಿಯನ್ನು ನೇಮಿಸಲಾಗಿದೆ. ಅಕ್ರಮ ಹಣ, ಇತರೆ ವಸ್ತುಗಳು ಸಾಗಾಟ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸತೀಶ್‌ ಕುಮಾರ್‌ ಹೇಳಿದರು.

ಅನುಮತಿ ಕಡ್ಡಾಯ
ಸಾರ್ವಜನಿಕ ಪ್ರದೇಶದಲ್ಲಿ ಬ್ಯಾನರ್‌ ಗಳನ್ನು ಅಳವಡಿಸಬಾರದು. ಅನುಮತಿ ಇಲ್ಲದೆ ಯಾವುದೇ ರೀತಿಯ ಸಭೆ ಸಮಾರಂಭಗಳನ್ನು ಆಯೋಜಿಸಬಾರದು. ಜಾತ್ರೆ, ಉರೂಸ್‌, ನೇಮ ಸಂದರ್ಭದಲ್ಲಿ ರಾತ್ರಿ 10 ಗಂಟೆ ಅನಂತರ ಧ್ವನಿವರ್ಧಕ ಬಳಸುವಂತಿಲ್ಲ. ಮಾ. 15ರೊಳಗೆ ಕೋವಿ ಹೊಂದಿರುವವರು ಸೂಚಿತ ಸ್ಥಳಕ್ಕೆ ತಂದೊಪ್ಪಿಸಬೇಕು ಎಂದರು. ದಾಖಲು ಪತ್ರ ಇಲ್ಲದೇ 50 ಸಾವಿರ ರೂ.ಗಳಿಗಿಂತ ಹೆಚ್ಚು ಹಣ ತೆಗೆದುಕೊಂಡು ಹೋಗುವಂತಿಲ್ಲ. ರಾಜಕೀಯವಾಗಿ ಯಾವುದೇ ಪಕ್ಷದ ಅಭ್ಯರ್ಥಿ ಪರ ಜಾಲತಾಣದಲ್ಲಿ ಸಂದೇಶ ಕಳುಹಿಸಿದರೆ ಅದಕ್ಕೆ ತಗಲುವ ವೆಚ್ಚ ಅಭ್ಯರ್ಥಿ ಖಾತೆಗೆ ಜಮೆ ಆಗಲಿದೆ. ಸಾರ್ವಜನಿಕವಾಗಿ ನಡೆಯುವ ಉತ್ಸವ, ಇನ್ನಿತರ ಕಾರ್ಯಕ್ರಮಗಳಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡಬಾರದು.

ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದರು. ಸುಳ್ಯ ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌ ಎಂ.ಆರ್‌. ಕಾನೂನು ಪಾಲನೆಯ ಕುರಿತು ಮಾಹಿತಿ ನೀಡಿದರು. ಎನ್‌.ಎ.ರಾಮಚಂದ್ರ, ಗೋಕುಲ್‌ ದಾಸ್‌, ಮುಸ್ತಾಫ, ಪಿ.ಎಸ್‌. ಗಂಗಾಧರ, ಬಾಲಗೋಪಾಲ ಸೇರ್ಕಜೆ, ದಾಮೋದರ ಮಂಚಿ, ತಿಮ್ಮಪ್ಪ ನಾವೂರು, ರಂಜಿತ್‌ ಪೂಜಾರಿ, ಕರುಣಾಕರ ಸೇರ್ಕಜೆ, ಅಬ್ದುಲ್‌ ರಜಾಕ್‌, ದಿನೇಶ್‌ ಕೊಟ್ಯಾನ್‌, ಕೇಶವ ಬಂಗ್ಲೆಗುಡ್ಡೆ, ಸರಸ್ವತಿ ಬೊಳಿಯಮಜಲು, ಮುನೀರ್‌ ಅನ್ಸಾರ್‌, ಹರ್ಷ ಕರುಣಾಕರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next