Advertisement

ಸುಳ್ಯ: ಪ್ರವಾಹಕ್ಕೆ ಸಿಲುಕಿ ವ್ಯಕ್ತಿ ಸಾವು

03:45 AM Jun 28, 2017 | Team Udayavani |

ಸುಳ್ಯ: ಸ್ನಾನಕ್ಕೆಂದು ಹೊಳೆಗಿಳಿದ ವ್ಯಕ್ತಿಯೊಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋದ ಘಟನೆ ಆಲೆಟ್ಟಿ ಗ್ರಾಮ ಪೈಂಬೆಚ್ಚಾಲ್‌ನಲ್ಲಿ ಸೋಮವಾರ ಸಂಭವಿಸಿದೆ. ಮಂಗಳವಾರ ಬೆಳಗ್ಗೆ ಸ್ವಲ್ಪ ದೂರದಲ್ಲಿ ಮರದ ಎಡೆಯಲ್ಲಿ  ಮೃತದೇಹ ಪತ್ತೆಯಾಯಿತು. ಪೈಂಬೆಚ್ಚಾಲ್‌ನ ಚಂದ್ರಕುಮಾರ್‌ ಯಾನೆ ಚಂದ್ರಶೇಖರ (33) ನೀರಲ್ಲಿ ಮುಳುಗಿ ಮೃತಪಟ್ಟವರು.

Advertisement

ಕಾರ್ಮಿಕರಾದ ಇವರು ಪೈಂಬೆಚ್ಚಾಲು ಹೊಳೆಗೆ ಸ್ನಾನಕ್ಕೆಂದು ಇಳಿದಿದ್ದು, ಭಾರೀ ಮಳೆಯಿಂದಾಗಿ ನೀರಿನ ಸೆಳೆತ ಹೆಚ್ಚಾಗುತ್ತಾ ಬಂದಿದ್ದು, ನೀರಲ್ಲಿ ಕೊಚ್ಚಿಹೋದರು. ಮಂಗಳವಾರ ಸ್ವಲ್ಪ ದೂರದಲ್ಲಿ ಅವರ ಮೃತದೇಹ ಪತ್ತೆಯಾಯಿತು. ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದೆರಡು ದಿನಗಳಿಂದ ಸುರಿದ ಮಳೆಯ ಬಿರುಸು ಮಂಗಳವಾರ ಕಡಿಮೆಯಾಗಿದೆ. ಮಂಗಳವಾರ ಒಂದೆರಡು ಬಾರಿ ಮಾತ್ರ ಮಳೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next